ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, February 18, 2025
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
Wednesday, July 31, 2024
ನಶೆಯ ಲೇಖನಿಯಲ್ಲಿನ ಕವಿತೆಗಳು
Tuesday, January 16, 2024
ಪೋಸ್ಟಾಫೀಸಿನಲ್ಲಿ ಪ್ರಬಂಧಗಳ ಜಡ್ಜ್ಮೆಂಟ್
Friday, October 13, 2023
ಸತ್ ಛಾಯಾ -ಕವನ ಸಂಕಲನದ ಕುರಿತು
ವಿಕ್ರಾಂತ್ ಕೇಳ್ಕರ್ ಅವರು ಸೃಜನಶೀಲ ಶಿಕ್ಷಕರು. ಮಾಹಿತಿ ತಂತ್ರಜ್ಞಾನದ ಹಲವು ಶಾಖೆಗಳನ್ನು ಸ್ಪರ್ಶಿಸಿದ ಅನುಭವವಿರುವವರು. ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದವರು. ಫೋಟೋಗ್ರಫಿಯಲ್ಲೂ ಆಸಕ್ತಿಯನ್ನು ಹೊಂದಿರುವ ಅವರು ಹಲವಾರು ಸೊಗಸಾದ ಪಕ್ಷಿಗಳ ಚಿತ್ರಗಳನ್ನು ಕ್ಲಿಕಿಸಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ತಂತ್ರಜ್ಞಾನವನ್ನು ಅನುಕೂಲಿಸುವಿಕೆಯ ಭಾಗವಾಗಿಸಿಕೊಂಡಿದ್ದಾರೆ.
ಹೀಗೆ ಸಕ್ರಿಯರಾಗಿರುವ ವಿಕ್ರಾಂತ್ ಕೇಳ್ಕರ್ ಅವರು ನಮ್ಮೆದುರಿಗೆ ಪ್ರತ್ಯಕ್ಷವಾಗಿದ್ದು ಸತ್ ಛಾಯಾ ಎಂಬ ಕವನ ಸಂಕಲನದೊಂದಿಗೆ. ಅದರೊಂದಿಗೆ ಅವರು ಕವಿತೆ ಬರೆಯುತ್ತಾರೆ ಎಂಬ ಸಂಗತಿಯೂ ನಮಗೆ ತಿಳಿಯಿತು! ಅವರು ಅದನ್ನು ಸಾಹಿತ್ಯ ಶಿಶುವಿನ ಗೀಚು ಸಾಹಿತ್ಯ ಎಂದು ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ಅಂತ್ಯಪ್ರಾಸವುಳ್ಳ ರಚನೆಗಳಿವು. ಅವರ ಕವಿತೆಗಳ ಮಾದರಿ ಹೀಗಿದೆ:
ಸಾಹಿತಿಯು ನಾನಲ್ಲ ಸಾಧುವೂ ಅಲ್ಲ
ಕವಿಯಂತೂ ನಾನಲ್ಲವೇ ಅಲ್ಲ
ಛಂದಾಲಂಕಾರಗಳು ಎನಗೆ ತಿಳಿದಿಲ್ಲ
ಆದರೂ ಗೀಚುವ ದಾಹ ತೀರಿಲ್ಲ
ಪ್ರತಿಕ್ರಿಯಾತ್ಮಕ ಮಾದರಿಯ ಕವಿತೆಗಳಿವು.ಈ ಕೃತಿಗೆ ತಾ.ಶ್ರೀ.ಗುರುರಾಜ್, ಸದಾಶಿವ ಸೊರಟೂರು ಮುಂತಾದ ಲೇಖಕರ ಅಮೂಲ್ಯವಾದ ಮುನ್ನುಡಿಗಳಿವೆ. ಕನ್ನಡದ/ಜಗತ್ತಿನ ಹಲವು ಕಾವ್ಯಧಾರೆಗಳಿಗೆ ಮುಖಾಮುಖಿಯಾಗುತ್ತಾ ವಿಕ್ರಾಂತ್ ಸರ್ ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
ಅವರಿಗೆ ಶುಭಾಶಯಗಳು.
*
ಕಾಜೂರು ಸತೀಶ್
Sunday, August 20, 2023
ಹನಿಹನಿಗಳಲ್ಲಿ ಜೀವನದರ್ಶನ
Monday, July 24, 2023
ಪಾಪಪ್ರಜ್ಞೆ, ಪತನ ಮತ್ತು ವಿಮೋಚನೆ
Tuesday, July 4, 2023
ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'
Wednesday, May 24, 2023
ರಾಜಕೀಯ ಮತ್ತು ಪ್ರಕೃತಿ
Thursday, April 27, 2023
ಮೌನದೊಡಲಿನ ಗಜ಼ಲ್
Sunday, April 23, 2023
ಬದುಕನ್ನೇ ಬಸಿದು ಬರೆದ ಕಾವ್ಯ
Sunday, April 16, 2023
ಅಪ್ಪಟ ಭೂಮಿಗೀತ
ಹದಿಮೂರು ವರ್ಷಗಳ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೊಡಗಿನಿಂದ ಅಲ್ಲಿಗೆ ಯಾರೂ ಬರುವುದಿಲ್ಲ ಎಂದುಕೊಂಡಿದ್ದೆ. ಅದು ಸುಮಾರು ಹೊತ್ತು ನಿಜವೂ ಆಗಿತ್ತು. ಆಮೇಲೆ ನನ್ನ ಮುಂದೆ ಒಬ್ಬರು ನಡೆದುಹೋಗುತ್ತಿದ್ದರು. 'ಮೇಡಂ ,ಗೊತ್ತಾಯ್ತಾ? ಕೇಳಿದೆ. 'ಇಲ್ಲ , ನನಗೆ ಅಷ್ಟು ಬೇಗ ಗುರ್ತಾ ಸಿಗುವುದಿಲ್ಲ ಆಯ್ತಾ' ಎಂದರು.
ಕಳೆದ ಮಾರ್ಚ್ 26ಕ್ಕೆ ಅವರು ಸಿಕ್ಕರು.
ಈ ನಡುವೆ ಹಲವಾರು ಬಾರಿ ಅವರನ್ನು ನೋಡಿದ್ದೇನೆ, ಭಾಷಣ ಆಲಿಸಿದ್ದೇನೆ , ಕವಿತೆ ಕೇಳಿದ್ದೇನೆ, ಲೇಖನಗಳನ್ನು ಓದಿದ್ದೇನೆ. ಮುಂದುವರಿದು 'ಸಹನಾ ಕಾಂತಬೈಲು ಅವರ ಪುಸ್ತಕಗಳನ್ನು ಕಳಿಸಿ' ಎಂದು ಪ್ರಕಾಶಕರಿಗೆ ಸಂದೇಶ ಕಳಿಸಿದ್ದೇನೆ.
ಈಚೆಗೆ , ಆಯಿರಸುಳಿ ಜಂಗಲ್ ಹಾಡಿಯಲ್ಲಿ ಕವಿತೆ ಓದುತ್ತಿದ್ದೆವು. ಹಿನ್ನೆಲೆಯಲ್ಲಿ ಆನೆ ಘೀಳಿಡುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸಹನಾ ಕಾಂತಬೈಲು ಅವರು ನನ್ನ ಕೈಗೆ 'ಆನೆ ಸಾಕಲು ಹೊರಟವಳು' ಕೃತಿಯನ್ನು ನೀಡಿ ಇದು ಈಗ ನಾಲ್ಕನೆಯ ಮುದ್ರಣ ಎಂದರು (ಶ್ರೀರಾಮ ಬುಕ್ ಸೆಂಟರ್ ,ಮಂಡ್ಯ). ಡಾ. ಹಾ.ಮಾ.ನಾಯಕ ಅಂಕಣ ಬರಹ ಪುರಸ್ಕಾರ ಪಡೆದಿದೆ ಈ ಕೃತಿ.
*
ಸಹನಾ ಕಾಂತಬೈಲು ಅವರು ತುಂಬಾ progressive thoughtಗಳಿಂದ ಆಗಿರುವವರು. ಈ ಅಂಕಣಮಾಲೆ 'ಅಂಕಣ' ಆಗಬೇಕಾದ ತುರ್ತಿನಲ್ಲಿ ಹುಟ್ಟಿರುವವು. ಆದರೆ, ಅಂಕಣದ ಹಿಂದಿನ ಸಿದ್ಧತೆಗಳೆಂದರೆ ಮಂಗಳೂರಿಗೆ ತೆರಳಿ laptop ರಿಪೇರಿ ಮಾಡಿಸುವುದು, ಅದಕ್ಕಾಗಿ ಪಟ್ಟುಬಿಡದೆ ಕತ್ತಲಾಗುವವರೆಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು!. ದೈನಿಕದ ಕ್ಷಣಗಳು ಹುಟ್ಟಿಸಿದ ಸೃಷ್ಟಿ ಅವು. ಆದರೂ ಬರೆದು ಮುಗಿಸಿದ ಮೇಲೆ / ಪ್ರಕಟವಾದ ಮೇಲೆ outdated ಆಗದ ಹಾಗೆ ತಾಜಾ ಆಗಿ ಉಳಿದುಕೊಂಡಿದೆ. ಅದೇ ನಾಲ್ಕನೆಯ ಮುದ್ರಣದವರೆಗೆ ಈ ಕೃತಿ ಕ್ರಮಿಸಿದ ಹಿನ್ನೆಲೆ.
'ನಾನು ಕೃಷಿಕ ಮಹಿಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಹನಾ ಕಾಂತಬೈಲು ಅವರ ಪ್ರತೀ ವಾಕ್ಯದಲ್ಲೂ ಉತ್ಸಾಹ ಪುಟಿಯುತ್ತದೆ. ತಮಗೆ ತಿಳಿಯದ್ದನ್ನು ಕಲಿಯುವ ಅಪಾರ ಹಂಬಲವಿದೆ ಅಲ್ಲಿ. ಕೊಟ್ಟಿಗೆಯಿಂದ ಕಟ್ಟುಬಿಚ್ಚಿದ ಕರುವಿನ ಕುಣಿದಾಟದ ಹಾಗಿರುವ ಉತ್ಸಾಹ ಅದು. ಮುಂಬೈ ವಿವಿಯಲ್ಲಿ ಆಹ್ವಾನಿತರಾಗಿ ಹೋಗುವಾಗ, ಅಮೇರಿಕದ ಗ್ರಂಥಾಲಯವನ್ನು ಭೇಟಿಮಾಡುವಾಗ ಅವರ ಕುತೂಹಲ, ಮುಜುಗರ, ಆತ್ಮವಿಶ್ವಾಸ, ಕೊರಗು- ಒಟ್ಟೊಟ್ಟಿಗೆ ವ್ಯಕ್ತವಾಗುತ್ತದೆ. ಜೋಪಡಿ ಮನೆಯ ಹೆಣ್ಣಿನ ಬದುಕನ್ನೂ ಅಪಾರ್ಟ್ಮೆಂಟಿನಿಂದ ಇಣುಕಿನೋಡಿ ನೋಯುವ ಹೃದಯವಿರುವ ಬರೆಹವಿದು.
ಚೆಂಬುವಿನಿಂದ ಮುಂಬಯಿಗೆ ತಲುಪುವಾಗ ಅಮೇರಿಕಾಕ್ಕೆ ಹಾರುವಾಗ ಅಂಕಣದ ವಸ್ತುವನ್ನಷ್ಟೇ ಅರಸಲು ತಮ್ಮನ್ನು limit ಮಾಡಿಕೊಂಡಿದ್ದರೆ ಬರೆಹ ಸೋಲುತ್ತಿತ್ತು. ಜಗತ್ತು ಮರೆತೇಬಿಟ್ಟಿರುವ ordinarinessಗಳನ್ನು ನೆನಪಿಸಿ celebrate ಮಾಡುವ(ಬಾಳೆ ಎಲೆ, ಅಡಿಕೆ ಹಾಳೆ, ಸ್ನಾನದ ಹಂಡೆ) , ಅವು ಉಳಿಯಬೇಕಾದ ಅನಿವಾರ್ಯತೆಯನ್ನು ತಿಳಿಸುವ ಮಾದರಿಯವು. ಹಲಸಿನ ಹಣ್ಣಿನ ಮೂಲಕ ಕೌಟುಂಬಿಕ ಸಂಬಂಧಗಳನ್ನು ಗ್ರಹಿಸುವ , ಆನೆಗೆ ಕಾಡಲ್ಲಿ ಆಹಾರ ಬೆಳೆಯಲು ಹೊರಡುವ(ಕಲ್ಲುಬಾಳೆ), ತನ್ನ ಹೆಂಡತಿಗೆ ಏನೂ ಕೆಲಸವಿಲ್ಲ ಎನ್ನುವ ರೇಡಿಯೋ ಜಾಹೀರಾತನ್ನೂ ಉಲ್ಲೇಖಿಸುವ (ಒಂದು ಪದವನ್ನೂ ಬಿಡದ ಹಾಗೆ- ಧ್ಯಾನಸ್ಥ ಬದುಕಿದ್ದರೆ ಮಾತ್ರ ಇವೆಲ್ಲಾ ಹೊಳೆಯುವುದು), ತಮ್ಮ ಹೋರಿಯನ್ನು ಮಾರಾಟ ಮಾಡದೆ ಕಾಡಿಗೆ ಅಟ್ಟುವ ಸಂದಿಗ್ಧತೆಯನ್ನೂ ವಿವರಿಸುವ - ಕ್ರಮ ಅನನ್ಯ.
ದೇಸೀ ಸಂಸ್ಕೃತಿಯ, ಹಸಿರುಮೂಲ ಸ್ತ್ರೀಪರ ಆಲೋಚನೆಗಳ, ಕೃಷಿ ಸಂಸ್ಕೃತಿಯ, ಹಳ್ಳಿ-ನಗರಗಳ, ಹಳತು- ಹೊಸತರ ಮುಖಾಮುಖಿಯ , ವೈಜ್ಞಾನಿಕ ತಳಹದಿಯ ಬರೆಹಮಾಲೆಗಳಿವು. ಇದಕ್ಕಿಂತ ಸರಳಗೊಳಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಭಾಷಾ ಸರಳತೆ ಇಲ್ಲಿದೆ. ಅಲ್ಲಲ್ಲಿ ವಾಸ್ತವ ಹಾಸ್ಯ ಬರೆಹದ ಶಕ್ತಿಯನ್ನು ಹೆಚ್ಚಿಸುತ್ತದೆ.
*
ಕಾಜೂರು ಸತೀಶ್
Sunday, January 1, 2023
ಮೊದಲ ಮಳೆಯ ಕವಿತೆಗಳ ಗಂಧ
Tuesday, August 9, 2022
'ನೆನಪುಗಳು ಮಾಸುವ ಮುನ್ನ' ಎಂಸಿಎನ್
Saturday, August 6, 2022
'ಹನಿ'ಗಳ ಮುತ್ತಿನಹಾರ
Friday, March 18, 2022
ಬಾಲ್ಯದ ಉಡದಾರ
Saturday, February 5, 2022
ಮುಟ್ಟದೆಯೇ ಮುತ್ತಿಡುವ ಮೋಹಕತೆ
ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು
'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.
Sunday, January 2, 2022
'ಯಾವುದೂ ಏನೂ ಅಲ್ಲದ ಪ್ರೀತಿ, ಆನಂದ ಮತ್ತು ಬೆಳಕು!'
ಜ ನಾ ತೇಜಶ್ರೀ ಅವರ ಮಾಗಿಕಾಲದ ಸಾಲುಗಳು ಸಂಕಲವನ್ನು ಓದಿದೆ. ಕವಿತೆಯನ್ನೂ ಮಗುವನ್ನೂ ಉದರದಲ್ಲಿಟ್ಟುಕೊಂಡು ಒಟ್ಟೊಟ್ಟಿಗೆ ಜನ್ಮನೀಡಲು ಹಪಿಹಪಿಸುವ ತಾಯೊಬ್ಬಳ ಕವಿತೆಗಳಂತಿವೆ ಇವು.
ನೀನು ನನ್ನನ್ನು ನಿನ್ನ ಹೊರಗೆ ಸೃಷ್ಟಿಸುತ್ತೀಯ
ನಾನು ನನ್ನ ಒಳಗೆ ನಿನ್ನನ್ನು
(ನಿತ್ಯ)
ಕಾಯದ ಬಿಡುಗಡೆಗಾಗಿ ಹಂಬಲಿಸುವ ಬಗೆ ಒಂದೆಡೆಯಾದರೆ ಇರುವ ಕಾಯದ ಪೊರೆಹರಿದುಕೊಂಡು ಹೊಸಮೈಯ್ಯನ್ನು ಪಡೆಯುವ/ಧರಿಸುವುದಕ್ಕಾಗಿನ ಧ್ಯಾನ ಮತ್ತೊಂದೆಡೆ.ಇಲ್ಲಿನ ಬಿಡುಗಡೆಯ ಹಂಬಲಕ್ಕೆ ಅಲ್ಲಲ್ಲಿ ಸಾವಿನ ಪರಿಮಳವಿದೆ.
ಜಗದ ಬಂಧನಗಳಾಚೆಗೆ
ಕನಸಲ್ಲಿ ಕಂಡ ಪಂಜರದ ಗಿಳಿ
ಬಟ್ಟಬಯಲಿಗಿಳಿದು ನವಿಲಾಗಬೇಕಿದೆ
ನವಿಲ ತೊಡೆಯಿಂದ ಗಿಳಿ
ಮತ್ತೆ ಹುಟ್ಟಬೇಕಿದೆ
ದಡದ ಹಂಗು ಆಗಲೇ ಕಳಚಾಗಿದೆ
(ಗುಟುಕು)
ನಿನ್ನ ಪವಿತ್ರ ಕೈಗಳೊಳಗೆ ಆಡಲು
ಈ ದೇಹ ಮುಕ್ತವಾಗಬೇಕು
(ದೇಹ)
ಇವು 'ನಾನು ನೀನು ಆನು ತಾನು'ಗಳ ಮಾದರಿಯದ್ದು.
'ನಾನು' ಕರಗದೆ
ನೀನು ಕವಿತೆಯಾಗುವುದು
ಹೇಗೆ ಹೇಳು?
(ನೀನು ಹೇಳು)
ನಾನು ನಿನಗೆ ಸಂಬಂಧಿಸಿಕೊಳ್ಳುವುದು
ಹೀಗೆ ಈ ಕವಿತೆಯ ಹಾಗೆ
(ಕವಿತೆಯ ಹಾಗೆ)
ಮಂಡಿಯೂರಿ ನನ್ನ ಹಣೆಯ ನಿನ್ನಡಿಗಳಿಗೆ ಒತ್ತುತ್ತೇನೆ
ಕವಿತೆ ಜನ್ಮ ತಾಳುತ್ತದೆ
ಪದಗಳ ನಡುವಿನ ಖಾಲಿಯಲ್ಲಿ
ಜೀವಮಿಡಿತದ ಸದ್ದು
(ಹಿಡಿ)
'ನೀನು' ಇಹ-ಪರಗಳಿಗೂ ಸಲ್ಲುವ ಅಥವಾ ಅವೆರಡೂ ಆಗಬಲ್ಲ ಸಾವಿನ ಸ್ವರೂಪದ್ದು. ಈ ನೀನು ಕೆಲವೊಮ್ಮೆ ಮಗುವಾಗಿ, ಇನಿಯನಾಗಿ ಬೆಳಕಾಗಿ ನಿರಾಕಾರವಾಗಿಯೂ ಕಾಣುತ್ತದೆ.
ನಿನ್ನ ದೇಹವ ಹಿಡಿಯಲೆತ್ನಿಸುತ್ತೇನೆ
ನೀನು ಮನಸ್ಸಾಗಿಬಿಡುತ್ತೀಯ
ಆ ಮನಸ್ಸಿಗೆ ಆಕಾರ ಕೊಡಲು ಕೂರುತ್ತೇನೆ
ಗಂಡು ನೀನು ಹೆಣ್ಣಾಗುತ್ತೀಯ
ಹೆಣ್ಣ ಬಿಡಿಸತೊಡಗುತ್ತೇನೆ
ಪಕ್ಷಿಯೊಂದು ರೆಕ್ಕೆ ಪಟಪಟಿಸುತ್ತದೆ
ಅದರೊಂದಿಗೆ ಹಾರುತ್ತೇನೆ
ಹೂವ ಸುಗಂಧ ಬಾಚಿ ತಬ್ಬುತ್ತದೆ...
ಮಾಗಿಕಾಲದ ನಿಸರ್ಗವು ವರ್ಣನೆಯಾಗಿ ಕಾಣುವುದಿಲ್ಲ ; ಕೊರತೆಯಾಗಿಯೂ ಕಾಣುವುದಿಲ್ಲ. ಜೀವದ, ಆತ್ಮ ಪರಮಾತ್ಮಗಳ (ನೀನು-ಅವನು)ಬೆರಗುಗಳನ್ನು ಶೋಧಿಸುವ ಕ್ರಮವದು. ಪಂಚಭೂತಗಳನ್ನಾವರಿಸುವ ಅನಾವರಿಸುವ ಬಗೆಯದು. ಅದ್ವೈತವೂ ಹೌದು .
ಬೆಳಕಲ್ಲಿ ನಾನು ಮತ್ತು ಅವನು
ಬೇರೆಬೇರೆಯಲ್ಲ
(ಮಹಾ ಆರತಿ)
ಹುಟ್ಟಿಲ್ಲದ ಮಗು ನಾನು
ತೇಲುತ್ತಿದ್ದೇನೆ ನಿನ್ನ ಅನಂತ ಅಲೆಗಳ ಮೇಲೆ ಕೆಳಗೆ ಒಳಗೆ
(ಹುಟ್ಟಿಲ್ಲ)
ಒಳಗೆ ಮುಲುಕುವ ಜೀವ
ಯಾರದ್ದೆಂದು ಹೇಳಬೇಕಿಲ್ಲ
(ಹೆಸರು)
*
ದೀರ್ಘ ಮೌನದಲ್ಲಿ ತುಂಬಿಕೊಳ್ಳಬಹುದಾದ ಕವಿತೆಗಳಿವು. ಈ ಕವಿತೆಗಳಲ್ಲಿ ಸಾವಿನ ನೆರಳಿದೆ, ಹುಟ್ಟಿನ ಪುಳಕವಿದೆ,ಬೆಳಕಿನ ಸೆಳಕಿದೆ, ಬೆರಗಿನ ಬೀಜವಿದೆ, ಅಧ್ಯಾತ್ಮದ ಗಂಧವಿದೆ.
*
ಕಾಜೂರು ಸತೀಶ್
Tuesday, August 24, 2021
A view on Manasu Abhisarike
Sunday, June 13, 2021
ಸರಳ ಮತ್ತು ಸ್ಪಷ್ಟ ಶೈಲಿಯ ತಾಜಾ ಕಾವ್ಯ
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...


















































