ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, October 12, 2024
ಜಿಗಣೆ
Monday, March 29, 2021
ನಮ್ಮಿಸ್ಕೂಲ್ನ ಪುಟ್ಟ
ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಎಲೆ,ಹೂವು,ಹಣ್ಣನ್ನೆಲ್ಲ
ಕಿತ್ತು ಬ್ಯಾಗಲ್ಲಿಟ್ಟ.
'ಬಾಯೊಳಗೇನೋ?' ಎಂದರೆ ಟೀಚರ್
'ಹಲ್ನೋವು ಟೀಚರ್' ಎಂದ್ಬಿಟ್ಟ;
'ಸರಿ ಮತ್ತೆ ತೋರ್ಸು' ಅಂದ್ರೆ
ನೆಲ್ಲಿಕಾಯಿ ಉಗಿದ್ಬಿಟ್ಟ.
'ನೋಟ್ಸ್ ಎಲ್ಲೋ?' ಎಂದರೆ ಟೀಚರ್
ಎಲೆಗಳ ಕಟ್ಟನು ತೋರ್ಸ್ಬಿಟ್ಟ;
'ಸರಿ ಮತ್ತೆ ಬರಿ' ಅಂದ್ರೆ
ಮುಳ್ಳಲಿ ಚೆನ್ನಾಗಿ ಬರ್ದ್ಬಿಟ್ಟ.
'ಬಣ್ಣ ಎಲ್ಲೋ?' ಎಂದರೆ ಟೀಚರ್
ಹೂಗಳ ರಾಶಿಯ ತೆಗೆದಿಟ್ಟ;
'ಸರಿ ಮತ್ತೆ ಹಚ್ಚು' ಅಂದ್ರೆ
ಹೂವನೆ ತೀಡುತ ಹಚ್ಬಿಟ್ಟ.
ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಕಲಿತದ್ನೆಲ್ಲ ತಲೇಲಿಟ್ಟು
ಮನೆ ಕಡೆ ಹೊರಟ.
**
-ಕಾಜೂರು ಸತೀಶ್
ನೀರು ಕಾಗೆ
ನೀರು ಕಾಗೆ ಊರ ನದಿಯ ನೀರಿನಲ್ಲಿ ಸ್ನಾನ ಮಾಡಿ
ಬಂಡೆ ಮೇಲೆ ಹಿಕ್ಕೆ ಹಾಕಿ ಚಿತ್ರವನ್ನು ಬಿಡಿಸುತ್ತೆ.
ಮೈಯೆಲ್ಲ ಇದ್ದಿಲ ಕಪ್ಪು ಹಿಕ್ಕೆ ಮಾತ್ರ ಬೆಳ್ಳಂಬಿಳಿ
ಕಲ್ಲಮೇಲೆ ಚೆಲ್ಲಿಬಿಟ್ಟರೆ ಕೊಕ್ಕರೆಯೇ ನಿಂತಂತೆ. ||ನೀರು ಕಾಗೆ||
ಸೂರ್ಯ ಸಂಜೆ ಬಣ್ಣ ಹಚ್ಚಿ ಅಲಂಕಾರ ಮಾಡುವಾಗ
ಹಾರಿ ಅದರ ಕೆಂಪು ಕಣ್ಣಿಗೆ ಕಾಡಿಗೆ ಹಚ್ಚುತ್ತೆ.||ನೀರು ಕಾಗೆ||
ಮುಸ್ಸಂಜೇಲಿ ಸ್ನಾನ ಮಾಡಿ ಅತ್ತಿಮರವ ಹತ್ತಿ ಕುಳಿತು
ಮೈಯ ಕಪ್ಪುಹರಡಿ ಹರಡಿ ಕತ್ತಲ ತರ್ಸುತ್ತೆ.||ನೀರು ಕಾಗೆ||
**
-ಕಾಜೂರು ಸತೀಶ್
ತುಂಟಾ ತುಂಟಿ
ಬಸ್ಸು
Saturday, February 10, 2018
ಮದುವೆ
ಮದುವೆಯು ನಡೆಯಿತು
ಊರ ಮಂದಿಯೆಲ್ಲ ಬಂದು
ಉಂಡು ಹರಸಿ ಹೋದರು.
ಕಾಗೆಗೆ ಬಿಳಿಯಂಗಿ
ಬೆಳ್ಳಕ್ಕಿಗೆ ಕಪ್ಪು ಸೀರೆ
ಏನು ಅಂದ ಏನು ಚಂದ ಅಬ್ಬಬ್ಬಬ್ಬಬ್ಬಾ
ಥೇಟ್ ರಾಜ ರಾಣಿಯರಂತೆ ಹಹ್ಹಹ್ಹಹ್ಹಹ್ಹಾ.
ಕುಡಿಯಲು ಅತ್ತಿ ಬೇರಿನ ನೀರು
ತಿನ್ನಲು ಕಾಡಿನ ಹಣ್ಣುಗಳು
ಜೊತೆಗೆ ಹುರಿದ ಏಡಿ ಮೀನು
ಗಮ್ಮತ್ತೋ ಗಮ್ಮತ್ತು.
ಮರಕುಟಿಗ ಡೋಲು ಬಾರಿಸಿ
ಕೋಗಿಲೆ ಪೀಪಿ ಊದಿ
ಕಪ್ಪೆಗಳೆಲ್ಲ ಹಾಡು ಹಾಡಿ
ಸಂಭ್ರಮವೋ ಸಂಭ್ರಮ.
ಉದ್ದ ಉಗುರಿನ ಪಾರು ಜೊತೆ
ಹುಲಿಯಣ್ಣನ ತಕತಕ ಕುಣ ತ
ಡೊಳ್ಳು ಹೊಟ್ಟೆ ಮಾರನ್ಜೊತೆ
ಆನೆಯಕ್ಕನ ತಕಥೈ ಕುಣಿತ .
ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ಮುಗಿಯಿತು
ಊರ ಮಂದಿಯ ಬಾಯ್ತುಂಬ
ಮದುವೆಯದೇ ಮಾತು.
*
ಕಾಜೂರು ಸತೀಶ್
ನಮ್ಮ ಪಿಂಕು
‘ಹ್ಯಾಪಿ ಬರ್ತ್ಡೇ’ ಅಂದ್ರೆ ಬಾಲ ಅಲ್ಲಾಡ್ಸುತ್ತೆ.
ಕೇಕು ತಂದು ಕ್ಯಾಂಡಲ್ ಹಚ್ಚಿ ಚಾಕು ಕೊಟ್ಟುಬಿಟ್ಟರೆ
ಕುಂಯ್ಕುಂಯ್ಗುಟ್ಟಿ ಜೊಲ್ಲು ಸುರಿಸಿ ಬಾಲ ಅಲ್ಲಾಡ್ಸುತ್ತೆ.
‘ಹಂಚಿ ಬಾ ತಗೋ’ ಎಂದು ಕೇಕು ಕೊಟ್ಟುಬಿಟ್ಟರೆ
ಮರದ ಕೆಳಗೆ ಎಲ್ಲಾ ತಿಂದು ಮೂತಿ ಒರೆಸಿ ಬರುತ್ತೆ.
‘ಅಯ್ಯೋ ಪೆದ್ದು ಹೀಗೇಕ್ಮಾಡ್ದೆ’ ಎಂದು ಕೇಳಿಬಿಟ್ಟರೆ
ಕಿವಿ ಬಾಗ್ಸಿ ಶರಣೆಂದು ಮುದುರಿ ಮಲ್ಕೊಳ್ಳುತ್ತೆ.
*
ಕಾಜೂರು ಸತೀಶ್
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...




