ರಾಜನು ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುವಾಗ ರಾಜನ ಕಾವಲಿಗೆಂದು ನಿಯೋಜಿಸಲಾದ ಸೈನಿಕನು ಬಿಪಿಯಲ್ಲಿ ಏರುಪೇರಾಗಿ ತಲೆತಿರುಗಿ ಬಿದ್ದನು. ಸಿಟ್ಟುಗೊಂಡ ರಾಜನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವನನ್ನು ಅಮಾನತು ಮಾಡಲು ಆದೇಶಿಸಿದನು.
ಸೈನಿಕನಿಗೆ ಪ್ರಜ್ಞೆ ಇರಲಿಲ್ಲ. ಹಾಗಾಗಿ ಅಮಾನತು ಪತ್ರವನ್ನು ಕೈಯಲ್ಲಿ ಇಟ್ಟು ಹೆಬ್ಬೆರಳಿನ ಸಹಿ ಪಡೆಯಲಾಯಿತು.
ಕ್ಷಣಗಳು ಉರುಳಿದಂತೆ ಇರುವೆಗಳು, ನೊಣಗಳು ಅವನನ್ನು ನೋಡಲು ಸಾಲು ಸಾಲಾಗಿ ಬರತೊಡಗಿವು.
*
✍️ ಕಾಜೂರು ಸತೀಶ್
No comments:
Post a Comment