ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, April 23, 2026
ದಂಡ
ತಿಮ್ಮನ ಹೆಲ್ಮೆಟ್ ಕಳುವಾಯಿತು. ದಾರಿಯಲ್ಲಿ ಪೊಲೀಸ್ ಹಿಡಿದು ದಂಡ ವಿಧಿಸಿದರು.
ತಿಮ್ಮ ಯೋಚಿಸಿದ. ನನಗೆ ಹೆಲ್ಮೆಟ್ ಮತ್ತು ಹಣ ಎರಡೂ ಹೋದವು. ಕದ್ದವನಿಗೆ ಹೆಲ್ಮೆಟ್ ಸಿಕ್ಕಿತು, ಕಟ್ಟಬೇಕಾದ ಹಣವೂ ಉಳಿಯಿತು.
" ಕಾಮನ್ ಸೆನ್ಸ್ ಬೇಕು ರೀ.. ಹೆಲ್ಮೆಟ್ ಹಾಕ್ಬೇಕು ಅಂತ ಗೊತ್ತಾಗಲ್ವಾ " ಉಚಿತ ಸಲಹೆ ಮಾತ್ರ ತಿಮ್ಮನ ಪಾಲಾಯಿತು.
*
✍️
ಕಾಜೂರು ಸತೀಶ್
Monday, March 23, 2026
ಶಿಫಾರಸ್ಸು
"ಸರ್, ನೀವು ಮನಸ್ಸು ಮಾಡಿದ್ರೆ ನನ್ನ ಪುಸ್ತಕವನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಬಹುದು"
"ಸತೀಶ್, ಹೀಗೆ ಹೇಳಿದ್ರು. ಪ್ರಶಸ್ತಿಗಳನ್ನು ಕೇಳಿ ಪಡೆಯುವಷ್ಟರ ಮಟ್ಟಿಗೆ ಜನ ಬೆಳೆದಿದ್ದಾರೆ!"
ನನಗೆ ಆತ್ಮೀಯರಾಗಿರುವ ವ್ಯಕ್ತಿಯ ಕುರಿತು ಅವರು ಮಾತನಾಡುತ್ತಿದ್ದರು!
*
✍️
ಕಾಜೂರು ಸತೀಶ್
Older Posts
Home
Subscribe to:
Comments (Atom)
ಕಾಜೂರು ಸತೀಶ್ ಅವರ ಕಾಡಿನ ಕವಿತೆಗಳ ಜಾಡು ಹಿಡಿದು...
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
ರೇಷ್ಮೆಯ ಹಾದಿ
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...