ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, March 18, 2024

ಚಿಂತಕರು

ತಿಮ್ಮ ಕಳೆದ ಎರಡು ದಿನಗಳಲ್ಲಿ ಇಬ್ಬರನ್ನು ಭೇಟಿಯಾಗಿದ್ದ. ಒಬ್ಬರು ತಮ್ಮ ಧರ್ಮದ ಉಳಿವಿಗಾಗಿ ಹೋರಾಟ ಮಾಡುವವರು ;ಮತ್ತೊಬ್ಬರು ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವವರ ವಿರುದ್ಧ ಹೋರಾಡುವವರು.

ಇಬ್ಬರೊಳಗೂ ದ್ವೇಷ ಹೊಗೆಯಾಡುತ್ತಿತ್ತು. ಕೊಲ್ಲಲೂ ಅವರು ಹೇಸುತ್ತಿರಲಿಲ್ಲ.

ತಿಮ್ಮ ಮರದ ಬಗ್ಗೆ ಬರೆದಿದ್ದ .ಹೂವಿನ ಬಗ್ಗೆ ಬರೆದಿದ್ದ. ನದಿಯ ಬಗ್ಗೆ ಬರೆದಿದ್ದ .ಮಳೆಯ ಬಗ್ಗೆ ಬರೆದಿದ್ದ .ಗಾಳಿಯ ಬಗ್ಗೆ ಬರೆದಿದ್ದ. ಹೀಗಾಗಿ ತಿಮ್ಮನನ್ನು ಅವರು ಕೊಲ್ಲಲಿಲ್ಲ. ಅವನ ನೆನಪು ಅವರಿಗೆ ಆಗಲಿಲ್ಲ.ಅವರ ಪಟ್ಟಿಯಲ್ಲಿ ಇವನು ಸ್ಥಾನ ಪಡೆಯಲಿಲ್ಲ. ಆದರೂ, ಇಂತಹ ನಿಷ್ಪ್ರಯೋಜಕ ಸಂಗತಿಗಳ ಬಗ್ಗೆ ಬರೆಯುವವರೆಲ್ಲರನ್ನು ಕೊಲ್ಲಬೇಕು ಎಂದು ಅವರೊಮ್ಮೆ ಯೋಚಿಸಿದ್ದರು.

ಮರು ವರ್ಷ ಬರ ಬಂದಾಗ, ಕುಡಿಯಲು ನೀರಲ್ಲದಿದ್ದಾಗ, ಸುಡು ಬೇಸಿಗೆ ಮೈಯ್ಯನ್ನೆಲ್ಲಾ ಸುಡತೊಡಗಿದಾಗ, ಕಾಡು ಒಣಗಿ ಎಲ್ಲವೂ ಬರಡಾದಾಗ , ಪ್ರಾಣಿಗಳೆಲ್ಲ ಬಂದು ಮನುಷ್ಯರನ್ನು ತಿನ್ನತೊಡಗಿದಾಗ.. ಆಗಲೂ ಅವರಿಗೆ ತಿಮ್ಮನ ನೆನಪಾಗಲಿಲ್ಲ- ಧರ್ಮದ ನೆನಪಾಯಿತು, ಜಾತಿಯ ನೆನಪಾಯಿತು, ಪಕ್ಷದ ನೆನಪಾಯಿತು.
*
ಕಾಜೂರು ಸತೀಶ್ 

Saturday, March 9, 2024

ಸಾವು

ಮೊಟ್ಟೆ ತಿನ್ನುತ್ತಿದ್ದ ತಿಮ್ಮ ಹೇಳಿದ: "ಈ ಮೊಟ್ಟೆಹಾಕಿದ ಕೋಳಿ ಮೊನ್ನೆ ಸತ್ತು ಹೋಯಿತು".