ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, March 23, 2026
ಶಿಫಾರಸ್ಸು
Thursday, October 9, 2025
ನನ್ನಲ್ಲಿ ಇರದ ಒಳ್ಳೆಯತನ...
Wednesday, October 8, 2025
ಒಂದು ಕ್ರೌರ್ಯವನ್ನು ನೆನೆದು...
Monday, September 8, 2025
ಒಂದು ಫೋನ್ ಕರೆ ಮತ್ತು...
Saturday, July 19, 2025
ಒಂದು ಗಸಗಸೆ ಮರದ ಸುತ್ತ...
Saturday, October 12, 2024
ಆ ಹುಡುಗ
Friday, July 5, 2024
ಎಲ್ಲಿ ಹೋದರು?
Monday, May 27, 2024
ಅವ್ಯವಸ್ಥೆ ಎಂದರೆ..
ಆ ಮೇಷ್ಟ್ರನ್ನು ಆ... ಶಾಲೆಗೆ ನಿಯೋಜಿಸಿದ್ದರು! (ಅಷ್ಟು ಹೊಟ್ಟೆಕಿಚ್ಚು?)
ಅಲ್ಲಿ ಇಬ್ಬರು ಮಕ್ಕಳು. ಒಂದೇ ಮನೆಯ ಇಬ್ಬರು ಮಕ್ಕಳು! ತಂತ್ರಜ್ಞಾನ/ facebook/whatsappಗಳನ್ನೇ ಅರಿಯದ ಇಬ್ಬರು. ಗುದ್ದಲಿ ತೆಗೆದು ಅಗೆಯುವುದೆಂದರೆ ಅಷ್ಟು ಇಷ್ಟ ಆ ಮಕ್ಕಳಿಗೆ.
ಅಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವವರಿಲ್ಲ. ಇದ್ದರೂ ಊರುಬಿಟ್ಟು ಹೊರಟುಹೋಗಿದ್ದಾರೆ. ಯಾರನ್ನಾದರೂ ಕೇಳೋಣವೆಂದರೆ ಮೊಬೈಲ್ ಸಿಗ್ನಲ್ ಇಲ್ಲ. ನೇಮಿಸೋಣವೆಂದರೆ ಅಂಥವರು ಆ ಊರಲ್ಲಿಲ್ಲ.
ಮೇಷ್ಟ್ರು ಅಂದಿನಿಂದ ಅಡುಗೆ ಭಟ್ಟರಾದರು.(ಇದನ್ನೆಲ್ಲ ವಿಚಾರಿಸಬೇಕಾದ ಮಂದಿ ಮನೆಯಲ್ಲೇ ಕುಳಿತು ಭರ್ಜರಿ ಅಡುಗೆ ಮಾಡಿ ಊಟಮಾಡಿ ಹಾಯಾಗಿದ್ದರು!).
ಅಡುಗೆ ಸಾಮಗ್ರಿಗಳನ್ನು ತಂದು, ಗ್ಯಾಸ್ ತಂದು ( ಅಡುಗೆ ಸಿಬ್ಬಂದಿ ಇಲ್ಲದಿದ್ದರೆ ಹಣ ಮುಟ್ಟುವಂತಿಲ್ಲ!) ಅಡುಗೆ ಮಾಡಿ ,ಪಾತ್ರೆ ತೊಳೆದು ಎರಡು ತಿಂಗಳು professional cook ಆದ ಆ ಮೇಷ್ಟ್ರು ಹೊಸ ಕೆಲಸಕ್ಕೆ ಒಗ್ಗಿಕೊಳ್ಳುತ್ತಿರುವಾಗಲೇ ಆ ಮಕ್ಕಳೆರಡು ದೂರದ ವಸತಿನಿಲಯಕ್ಕೆ ಸೇರಿಕೊಂಡರು. ಆ ಮೂಲಕ ಆ ಶಾಲೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡಿತು.
ಇತ್ತ ಮೂಲ ಶಾಲೆಯ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ವರ್ಗಾವಣೆ ಪತ್ರ ಪಡೆದುಕೊಂಡು ಬೇರೆ ಕಡೆಗೆ ಹೊರಟುಹೋಗಿದ್ದರು.
ಪ್ರತೀ ಮಾನ್ಸೂನ್ ಆರಂಭದಲ್ಲಿ ಇದು ಮುಂದುವರಿಯುವಾಗ ಆ ಮೇಷ್ಟ್ರು ಇರುವ ಮೂಲ ಶಾಲೆಯ ಬಾಗಿಲು 'ಮುಚ್ಬಿಡ್ಲಾ ಮೇಷ್ಟ್ರೇ' ಎಂದು ಮುಗ್ಧವಾಗಿ ಕೇಳಿದಂತೆ ಅನ್ನಿಸುತ್ತದೆ.
Sunday, January 14, 2024
ಒಂದನೇ ಇಯತ್ತೆ ಮತ್ತು ನನ್ನ ನೆನಪಿನಂತಹ ಆ ಬೆಟ್ಟ
Thursday, December 22, 2022
ಸಿದ್ದೇಶಿ ಸರ್ ಎಂಬ ಪ್ರೇರಕ ಶಕ್ತಿ
28-11-2014. ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧೆಗೆ ಹೋಗಿದ್ದೆ. ಅದು ನಡೆಯುತ್ತಿದ್ದ ಶೂನ್ಯ ವೇಳೆಯಲ್ಲಿ ಮುಂದೆ ಬಂದ ಯುವ ಉಪನ್ಯಾಸಕರೊಬ್ಬರು ಅಲ್ಲಿದ್ದವರನ್ನು ಉದ್ದೇಶಿಸಿ 'ರಂಗಣ್ಣನ ಕನಸಿನ ದಿನಗಳು ಗೊತ್ತಾ?' ಎಂದರು.
ಮೂಲೆಯಲ್ಲಿ ನಿಂತಿದ್ದ ನಾನು 'ಇದ್ಯಾರು ಸಾಹಿತ್ಯ ಕೃತಿಯ ಕುರಿತು ಹೇಳುತ್ತಿರುವರಲ್ಲಾ' (ಅದೂ ಮಡಿಕೇರಿಯಲ್ಲಿ!) ಎಂದುಕೊಂಡೆ ಬೆರಗಿನಿಂದ.
*
ಎಂ.ಆರ್. ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯಲ್ಲಿ ನಾಯಕ ರಂಗಣ್ಣ ಶಿಕ್ಷಕನಾಗಿ, ಅಧಿಕಾರಿಯಾಗಿ ಕಂಡು ಅನುಭವಿಸಿದ ಶಿಕ್ಷಣ ವ್ಯವಸ್ಥೆಯ ಕುರಿತ ಅನನ್ಯ ಒಳನೋಟಗಳಿರುವ ಕಾದಂಬರಿ. ರಂಗಣ್ಣನ ಕಾಳಜಿ, ಸೇವಾತತ್ಪರತೆಯೇ ವ್ಯವಸ್ಥೆಯ ಒಳಗಿಳಿದು ವಸ್ತುಸ್ಥಿತಿಯನ್ನು ವಿವೇಚಿಸಲು ಪ್ರೇರಣೆ.
*
ಮತ್ತೆ ಮಡಿಕೇರಿಯ ಟೋಲ್ ಗೇಟಿನಲ್ಲಿ ಒಂದು ಬ್ಯಾಗು ನೇತುಹಾಕಿಕೊಂಡು ಬಸ್ ಹತ್ತುವ/ಇಳಿಯುವ ಅವರನ್ನು ದೂರದಿಂದ ಗಮನಿಸುತ್ತಿದ್ದೆ. ಆಗ ಅವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿದ್ದರು.
ಅದೇ ಸಮಯದಲ್ಲಿ ನಾನಿದ್ದ ಶಾಲೆಗೆ ಬಂದಿದ್ದರು. ನನ್ನ ಪರಿಚಯವೂ ಆಯಿತು.
*
ಎಂಟು ವರ್ಷಗಳು ಸಂದಿವೆ. ಆ ಕಾದಂಬರಿಯ ಕುರಿತು ಪ್ರಸ್ತಾಪಿಸಿದ ಸಿದ್ದೇಶಿ ಸರ್ ಚಿತ್ರದುರ್ಗಕ್ಕೆ ಹಿಂತಿರುಗಿದರೂ ನನಗೀಗ ರಂಗಣ್ಣನಂತೆ ಅಪಾರ ಕನಸುಗಳನ್ನು ಹೊತ್ತ ಜೀವದ ಹಾಗೆ ಕಾಣಿಸುತ್ತಿದ್ದಾರೆ.
*
ನಾವಿಬ್ಬರು ಭೇಟಿಯಾದಾಗಲೆಲ್ಲಾ ನಮ್ಮನಮ್ಮ ಕನಸುಗಳ ಬಗ್ಗೆ ಚರ್ಚಿಸಿದ್ದೇವೆ: ಚಿತ್ರದುರ್ಗದ ನಿಜಲಿಂಗಪ್ಪ ಸಮಾಧಿಯ ಬಳಿ, ದೊಡ್ಡಮಳ್ತೆಯ ಹೊನ್ನಮ್ಮನಕೆರೆ ಗುಡ್ಡದಲ್ಲಿ, ಡಯಟ್ ಗೋಡೆ-ಗೋಡೆಗಳಾಚೆ. ಪಠ್ಯಪುಸ್ತಕಗಳನ್ನು ಮೀರಿದ , ಸಿದ್ಧಮಾದರಿಗಳನ್ನು ಮುರಿಯುವ ಆಲೋಚನೆಗಳೇ ಅವು; ಜೀವಪರ ಚಿಂತನೆಗಳು.
ಅವರಿರುವಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಪರಿಣಾಮದ ಬಗ್ಗೆ ಆಲೋಚಿಸದೆ, ತಮ್ಮ ನಿಲುವುಗಳನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದು. ಜಿಲ್ಲೆಯ ಹಲವು ಶಿಕ್ಷಕರು ಅವರ ಪ್ರೋತ್ಸಾಹದ ಮಾತಿಗೆ ದುಡಿಯುವ ಕಸುವನ್ನು ಹೆಚ್ಚಿಸಿಕೊಂಡಿದ್ದಾರೆ, ಹೊಸತನವನ್ನು ಮೈದುಂಬಿಕೊಂಡಿದ್ದಾರೆ.
ಮಾತನಾಡುವಾಗ ಕೇಳುಗ/ನೋಡುಗರನ್ನು ಗಮನದಲ್ಲಿಟ್ಟುಕೊಂಡು , ಅವರನ್ನು ಮಾತಿಗೆಳೆಯುತ್ತಾ ಮುಂದುವರಿಯುವ , ಹಲವು ವಾಸ್ತವ ಅನುಭವಗಳನ್ನು ಮಾತಿನ ಕೇಂದ್ರಕ್ಕೆ ಲಿಂಕ್ ಮಾಡುವ ಬಗೆ ಇವರದು.
(ಯಾವತ್ತೂ ನಿದ್ರಿಸುವ ನನ್ನ ಮೊಬೈಲಿನ ಬಗ್ಗೆ ಅವರಿಗೆ ಬೇಸರ/ಸಿಟ್ಟು. ಹಲವು ಭೇಟಿಗಳಿಂದ ತಪ್ಪಿಸಿಕೊಳ್ಳುವ ನನ್ನ ನಿಲುವುಗಳ ಬಗ್ಗೆಯೂ).
ಸಿದ್ದೇಶಿ ಸರ್ ಸುಮಾರು ಒಂದು ದಶಕವನ್ನು ಇಲ್ಲಿ ಬಾಳಿದ್ದಾರೆ. ಹಲವು ಶಿಕ್ಷಕ/ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.
ಈ ಅನುಭವಗಳು ಅವರನ್ನು ಆಯುಷ್ಯವಿಡೀ ಬೆಚ್ಚಗಿರಿಸುತ್ತವೆ!
*
ಕಾಜೂರು ಸತೀಶ್
Tuesday, July 26, 2022
ನಮ್ಮೊಳಗೆ ಉಳಿದ ರಂಜನ್ ಸರ್
Sunday, July 17, 2022
ಈ ಕೊರಳನುಳಿಸು ಪ್ರಭುವೇ..
Sunday, July 10, 2022
ಅವನು ಹೊರಟುಹೋದ!
Thursday, July 7, 2022
ದುರುಳನೊಬ್ಬನನ್ನು ವಂಚಿಸಿದ ಕಥೆ!
ಇಂಗ್ಲಿಷ್ ಎಂಬ ಅವಮಾನ ಮತ್ತು ವ್ಯಾಮೋಹ
Thursday, June 30, 2022
ತಿಂದು ಬದುಕುವ ವೈಖರಿ
Friday, August 27, 2021
ಪಾಪದ ಕುರಿಂಜಿ ಹೂವುಗಳೂ ಮತ್ತು ಪಾಪಿ ಮನುಷ್ಯರೂ..
Thursday, July 1, 2021
ಮಚ್ಚಾಡೋ ಸರ್
Saturday, May 29, 2021
ಮೌಲ್ಯ , ಶಿಕ್ಷಣ, ಅಹಂ, ಕಾಮನ್ ಸೆನ್ಸ್ ಮತ್ತು ಭ್ರಷ್ಟಾಚಾರ
Sunday, May 9, 2021
ನಿವೃತ್ತಿ ಮತ್ತು ಸುಲಿಗೆ
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...









































