ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, July 26, 2022

ನಮ್ಮೊಳಗೆ ಉಳಿದ ರಂಜನ್ ಸರ್

ಒಂದು ದೀರ್ಘಾವಧಿಯ(ಹೆಚ್ಚು ನೆನಪಲ್ಲುಳಿದಿರುವುದರಿಂದ ಅದು ದೀರ್ಘವಾದ ಬದುಕೆನಿಸಿರುವುದು) ನನ್ನ ಬದುಕಿನಲ್ಲಿ 'ಕಚೇರಿ' ಎಂಬ ಪದವು corruptionನ ಅವತಾರವಾಗಿಯೇ ಉಳಿದಿದೆ. 
*

ಅದಕ್ಕೆ ಅಪವಾದವಾದವೊಂದು ನನ್ನ ಅನುಭವಕ್ಕೆ ಬಂದಿರುವುದು ನನ್ನ ಭಾಗ್ಯ.
ಕಳೆದೆರಡು ವರ್ಷಗಳಲ್ಲಿ ಸೋಮವಾರಪೇಟೆ ಬಿಇಓ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕತೆಯ ಉತ್ತುಂಗದಲ್ಲಿರುವಾಗಲೇ ವರ್ಗಾವಣೆಗೊಂಡು ನಮ್ಮೊಳಗೆ ಉಳಿದ ರಂಜನ್ ಸರ್ ಅವರ ಕುರಿತ ಮಾತುಗಳಿವು.


'ತಮ್ಮ ಪಾಡಿಗೆ ತಾವು' ಇದ್ದುಕೊಳ್ಳುತ್ತಲೇ ಮಾಡಬೇಕಾದ ಕೆಲಸಗಳನ್ನು ನಮ್ಮ ಅರಿವಿಗೆ ಬಾರದಂತೆ ಮುಗಿಸಿ ಅದನ್ನು ಮುಗಿಸಿರುವ ಕುರಿತೂ ಮಾತನಾಡದ ಅವರ ಮುಗ್ಧತೆಗೆ ಹಲವಾರು ಬಾರಿ ಮನಸ್ಸಿನಲ್ಲೇ ಬೆನ್ನುತಟ್ಟಿದ್ದೇನೆ. ಅವರು ಇಲ್ಲಿರುವಾಗಲೇ ಅದನ್ನು ಬರೆಯಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರು ವರ್ಗಾವಣೆಗೊಂಡರು!


ಈ ಅಲ್ಪ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೀಗೇ ಅಲ್ಲವೇ?
*
ಕಾಜೂರು ಸತೀಶ್

No comments:

Post a Comment