ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, August 6, 2022

'ಹನಿ'ಗಳ ಮುತ್ತಿನಹಾರ

ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ 'ಮುತ್ತಿನಹಾರ' ಹನಿಗವನಗಳ ಸಂಕಲನವು ಪ್ರತಿಕ್ರಿಯಾತ್ಮಕ ಮಾದರಿಯದು. 'ಆ ಕ್ಷಣದ ವರ್ತಮಾನ'ದಲ್ಲಿ ಸೃಷ್ಟಿಯಾದ ಹನಿಗವನಗಳವು.


ಎಂ ಜಿ ರೋಡಿನಲ್ಲಿ
ಟ್ರಾಫಿಕ್ ಜಾಮಿದೆ
ಗಾಂಧಿ ತೋರಿಸಿದ ಹಾದಿ
ಇಂದಿಗೂ ಖಾಲಿಯಿದೆ
*
ದೇವರು
ಸ್ವರ್ಗದಲ್ಲಿ ಆರಾಮದಲ್ಲಿದ್ದಾನೆ
ಮನುಷ್ಯ ಭೂಮಿಯನ್ನು
ನರಕ ಮಾಡುತ್ತಿದ್ದಾನೆ
*
ಹೊಸಾ ದೇವರುಗಳು
ಧರ್ಮ ಸಂದೇಶಗಳು ಇನ್ನು ಬೇಡ
ಕೊಲ್ಲಲು ಜನರೇ ಉಳಿದಿಲ್ಲ
ಪ್ರಪಂಚಕ್ಕೆ ಬೆಂಕಿ
ಹಾಕಿದ ನಂತರವೂ
ಹೃದಯದೊಳಗೆ ಬೆಳಕು ಏಕಿಲ್ಲ?!
*
ಪಾಸು ಬೇಕೆಂದು ಜನರು
ಬಹಳ ಸರ್ಕಸ್ ಮಾಡಿದ್ದಾರೆ
ಟೋಲ್ಗೇಟಿನಲ್ಲಿ ನೋಡಿದೆ
ತಿಮ್ಮಯ್ಯಜ್ಜನನ್ನೂ ಹೊರಗೆ ನಿಲ್ಲಿಸಿದ್ದಾರೆ.


ಇಂತಹ ಸಾರ್ವಕಾಲಿಕ ಸ್ವರೂಪವುಳ್ಳ ಹನಿಗಳೊಂದಿಗೆ ಒಂದು ನಿರ್ದಿಷ್ಟ ಕಾಲಮಾನದ ಕುರಿತ ಪ್ರತಿಕ್ರಿಯೆಯ ಹನಿಗಳೂ ಈ ಸಂಕಲನದಲ್ಲಿವೆ:

ಟೊಮೆಟೋ
ಜಾಸ್ತಿ ಬೀಗಬೇಡ
ಆಲೂಗಡ್ಡೆಯ ಮೇಲೆ ರೇಗಬೇಡ!
*
ಏಬಿಡಿಗೆ ಒಂದು ಬಿರಿಯಾನಿ
ಉಳಿದವರಿಗೆ ಹೇಳಿ ಕುಷ್ಕಾ
ಆರ್ಸಿಬಿ ಪಂದ್ಯ ಗೆಲ್ಲುವುದಿಲ್ಲ
ನೋಡಲು ಬಂದರೆ ಅನುಷ್ಕಾ!
*
ರಾಖಿ ಸಾವಂತ್
ರಾಖಿ ಕಟ್ಟುವುದಿಲ್ಲ
ಅವಳಿಗೆ ಹುಡುಗರ
ಶಾಪ ತಟ್ಟುವುದಿಲ್ಲ!
*

ಈ ಹನಿಗಳಲ್ಲಿ pun, funಗಳಿವೆ; Punchಗಳಿವೆ; ಒಳನೋಟಗಳಿವೆ. ವರ್ತಮಾನವನ್ನು ಪದ್ಯಕ್ಕೊಳಪಡಿಸುವ ತುರ್ತಿನಲ್ಲಿ ಇವು ಹುಟ್ಟಿವೆ.

ಹಾಗೆಯೇ, ನಿರ್ದಿಷ್ಟ ಘಟನೆ/ ಕಾಲಘಟ್ಟದ ಬಗೆಗಿನ ಪ್ರತಿಕ್ರಿಯೆಯು 'ಸದಾ ಸಮಕಾಲೀನ' ಅಥವಾ ಸಾರ್ವಕಾಲಿಕ ಲಕ್ಷಣವನ್ನು ಪಡೆದುಕೊಳ್ಳಬೇಕಿದೆ.
*
ಕಾಜೂರು ಸತೀಶ್ 

No comments:

Post a Comment