ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, May 9, 2021

ನಿವೃತ್ತಿ ಮತ್ತು ಸುಲಿಗೆ

ನಿವೃತ್ತಿ !

ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಆ ದಿನ ಕೆಲವು ಗಣ್ಯವ್ಯಕ್ತಿಗಳು ಅವರ ಕೆಲಸದ ಸ್ಥಳಕ್ಕೆ ತೆರಳಿ ಕೊರಳಿಗೆ ಹಾರ ಹಾಕಿ ಶಾಲು ಹೊದಿಸಿ ಬಾಯಿ ತುಂಬಾ ಹೊಗಳಿ (ಅಟ್ಟಕ್ಕೇರಿಸಿ) ಪಟ ತೆಗೆಸಿಕೊಂಡು ಮಾರನೆಯ ದಿನ ಪತ್ರಿಕೆ/ಟಿವಿಯಲ್ಲಿ ಬರುವಂತೆ ಮಾಡುತ್ತಾರೆ.

'ಇಷ್ಟು ಕಾಲ ದುಡಿದದ್ದಾಯಿತು- ಇನ್ನು ಮನೆಯಲ್ಲಿ ಹಾಯಾಗಿರೋಣ' ಎಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಆದರೆ, ಹಾಗೆ ಮನೆಯಲ್ಲಿ ಇರಲು ಸಾಧ್ಯವೇ? ಪಿಂಚಣಿ ಬೇಡವೇ? ಮನೆಯಲ್ಲಿ ಸುಮ್ಮನೆ ಕುಳಿತರೆ ಅದು ಸಿಗುವುದೇ?

ಸನ್ಮಾನ ಮಾಡಿದ ಮಂದಿ ತಮ್ಮ ಪಟ/ವೀಡಿಯೊಗಳನ್ನು ಪತ್ರಿಕೆ/ದೃಶ್ಯ ಮಾಧ್ಯಮದಲ್ಲಿ ನೋಡಿ ಹಿರಿಹಿರಿ ಹಿಗ್ಗಿ ತಮ್ಮ ಬೆನ್ನುಗಳನ್ನು ಇತರರಿಗೆ ಕೇಳಿಸುವಷ್ಟು ಜೋರಾಗಿ ತಟ್ಟಿಕೊಳ್ಳುತ್ತಾರೆ.
ಅಂದ ಹಾಗೆ, ಮೊನ್ನೆ ಗೆಳೆಯರೊಬ್ಬರು ಕರೆಮಾಡಿ ಹೇಳುತ್ತಿದ್ದರು: 'ಸನ್ಮಾನ ಮಾಡ್ತಾರಲ್ವಾ.. ಹಾರ- ಶಾಲು-ಹಣ್ಣು.. ಇವೆಲ್ಲಾ ಅವ್ರ ಹತ್ರಾನೇ ಸುಲಿಗೆ ಮಾಡಿ ತಗೊಂಡಿರ್ತಾರೆ'!

ಕೆಲಸಕ್ಕೆ ಸೇರುವಾಗಲೇ ಸುಲಿಗೆ ಮಾಡುವ ಕಚೇರಿ, ನಿವೃತ್ತಿ ಹೊಂದಿದಾಗ ಮತ್ತೆ ಸುಲಿಗೆ ಮಾಡುತ್ತದೆ. ನಿವೃತ್ತಿ ಹೊಂದಿದ ದಿನ ಬಹುಪರಾಕ್ ಹೇಳಿದ ಮಂದಿಯೆಲ್ಲ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಕೊಡದಿದ್ದರೆ ಪಿಂಚಣಿಯೇ ಇಲ್ಲ!

ಸೇವೆಯಲ್ಲಿರುವಾಗಲೇ ನಿಧನಹೊಂದಿದರೆ ಮುಗಿಯಿತು- ಕೆಲಸ ಬಯಸಿ ಬರುವ ಅವರ ಮಕ್ಕಳನ್ನು ಸುಲಿದು ನುಂಗಿ ನೀರುಕುಡಿಯುತ್ತಾರೆ.

ಹಾಗೆ ಕೆಲಸ ಪಡೆದುಕೊಂಡ ಮಕ್ಕಳೇ ಮತ್ತೊಂದಷ್ಟು ನಿವೃತ್ತರ, ಮರಣ ಹೊಂದಿದ ನೌಕರರ ಮಕ್ಕಳ ರಕ್ತ ಹೀರುತ್ತಾರೆ.

ಹಿಂಸೆ ಮುಂದುವರಿಯುತ್ತದೆ..
*




- ಕಾಜೂರು ಸತೀಶ್

No comments:

Post a Comment