ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 20, 2021

ಅಂತರ

'....ಇದೇ ಕೆಲಸವನ್ನು ಖಾಸಗಿಯವರಿಗೆ ಹಂಚಿದ್ದಿದ್ದರೆ..' ಗೆಳೆಯರೊಬ್ಬರು ಕೇಳಿದರು.

'ಕೆಲಸ ಬೇಗ ಮುಗಿಯುತ್ತಿತ್ತು, discipline ಇರುತ್ತಿತ್ತು, ಮಾಡುವ ಕೆಲಸದಲ್ಲಿ dedication ಇರುತ್ತಿತ್ತು', ಹೇಳಿದೆ.

'ಅವರೂ ಮನುಷ್ಯರಲ್ಲವೇ? ಕೆಲಸದ ವಿಷಯದಲ್ಲಿ ಅವರಿಗೇಕೆ ವಿಶೇಷ ಗುಣಗಳು ಪ್ರಾಪ್ತವಾಗುವುದು? ಅವರ ಕೆಲಸ ಯಾಕೆ ಅಷ್ಟು ವೇಗವನ್ನು ಪಡೆದುಕೊಳ್ಳುತ್ತದೆ?' ಕೇಳಿದರು.

'ಬದುಕು', ಹೇಳಿದೆ.

'ಅದು ಕೊರತೆಯನ್ನು ಸೃಷ್ಟಿಸಿದಷ್ಟೂ ನಮ್ಮ ಆಲಸ್ಯ ನೀಗುತ್ತಾ ಹೋಗುತ್ತದೆ. ಅದಕ್ಕಾಗಿ ನಾವು ನಿಷ್ಠೆಯಿಂದ ದುಡಿಯಬೇಕಾಗುತ್ತದೆ. ಆಗ ನಮ್ಮನ್ನು ನಿಯಂತ್ರಿಸುವ ಕೈಗಳು ಶಕ್ತವಾಗಿರುತ್ತವೆ. ಅನಿವಾರ್ಯವಾಗಿ ನಾವು ಒಪ್ಪಿಕೊಂಡು ಸಹಿಸಿಕೊಂಡು ದುಡಿಯುವವರಾಗುತ್ತೇವೆ'.

' ಹಾಗಾದರೆ ಇಲ್ಲಿ ಅದು ಸಾಧ್ಯವಿಲ್ಲವೇ?'

' ಸಾಧ್ಯ, ನಿಯಂತ್ರಿಸುವವರ ಮನಸ್ಸು, ಕೈಗಳು ಶುದ್ಧವಾಗಿದ್ದರೆ ಅದು ಸಾಧ್ಯ'

'ಅಥವಾ, ಈಗ ಕೆಲವೇ ಕೆಲವರಿಗಿರುವ ಸ್ವಯಂಶಿಸ್ತು ಎಲ್ಲರಲ್ಲೂ ತುಂಬಿಕೊಂಡಾಗ..'

'ಅಥವಾ ದುಡಿದಷ್ಟು ಪಗಾರ ನೀಡಿದಾಗ, ಸಾಮರ್ಥ್ಯ ಇರುವವರಿಗೆ ಬಡ್ತಿ ನೀಡಿದಾಗ..'
*


ಕಾಜೂರು ಸತೀಶ್

No comments:

Post a Comment