ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, May 25, 2021

ಬೇಸಿಗೆಯಲಿ ಗಾಯಗೊಳ್ಳಬಾರದು

ಬೇಸಿಗೆಯಲಿ ಗಾಯಗೊಳ್ಳಬಾರದು

ಅಕಾಸ್ಮಾತ್ ಪಾದದಲ್ಲಿ 
ಅಥವಾ ತುಸು ಮೇಲೆ
ಮಂಡಿಯಲ್ಲಿ ತೊಡೆಯಲ್ಲಿ
...................................
ಗಾಯಗೊಂಡರೆ...


ಹೊಟ್ಟೆಪಾಡು ಬಿಸಿಲಿಗೆ ಬೆಂದು
ಕಡಲು ಅಪ್ಪಳಿಸಿ
ಹನಿಹನಿ
ಕೆಳಜಾರಿ
ತಾಗಿದರೆ
'ಚುರುಕ್'


ಅದಕ್ಕೇ ಹೇಳುತ್ತಿರುವುದು
ಮಳೆಸುರಿಯುತ್ತಿರಬೇಕು
ಕಾಲ ಚಂಡಿಯಾಗಿರಬೇಕು
ತಿಳಿಯಬಾರದು ಕಣ್ಣಿಗೂ..

ನಾಲಿಗೆಯೂ ಒಣಗಬಾರದು.
*




ಕಾಜೂರು ಸತೀಶ್ 

No comments:

Post a Comment