ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, March 23, 2026

ಶಿಫಾರಸ್ಸು

"ಸರ್, ನೀವು ಮನಸ್ಸು ಮಾಡಿದ್ರೆ ನನ್ನ ಪುಸ್ತಕವನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಬಹುದು"

"ಸತೀಶ್, ಹೀಗೆ ಹೇಳಿದ್ರು. ಪ್ರಶಸ್ತಿಗಳನ್ನು ಕೇಳಿ ಪಡೆಯುವಷ್ಟರ ಮಟ್ಟಿಗೆ ಜನ ಬೆಳೆದಿದ್ದಾರೆ!"

ನನಗೆ ಆತ್ಮೀಯರಾಗಿರುವ ವ್ಯಕ್ತಿಯ ಕುರಿತು ಅವರು ಮಾತನಾಡುತ್ತಿದ್ದರು!
*
✍️ ಕಾಜೂರು ಸತೀಶ್

Monday, March 9, 2026

ದುಃಖ

ಅದೊಂದು ದೈತ್ಯ ಸಂಪಿಗೆ ಮರ. ತನ್ನ ಪರಿಮಳದಿಂದಲೂ ಗಾತ್ರದಿಂದಲೂ ಜನಜನಿತವಾಗಿತ್ತು.

ಒಂದು ದಿನ ಅದು ಮುರಿದು ಬಿತ್ತು.

ನೋಡಿದ ಜನ " ಇಷ್ಟು ದಿನ ಇದರ ಒಳಗೆ ಇಷ್ಟು ದೊಡ್ಡ ಟೊಳ್ಳು ಇದೆಯೆಂದು ಅಂದುಕೊಂಡಿರಲಿಲ್ಲ " ಎಂದರು.

ತಿಮ್ಮ ಯೋಚಿಸಿದ - "ಮರ ಹೇಳಿಕೊಳ್ಳುವುದಿಲ್ಲ. ಮನುಷ್ಯರು ಹೇಳಿಕೊಳ್ಳುತ್ತಾರೆ "
*
✍️ಕಾಜೂರು ಸತೀಶ್