ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, March 9, 2026

ದುಃಖ

ಅದೊಂದು ದೈತ್ಯ ಸಂಪಿಗೆ ಮರ. ತನ್ನ ಪರಿಮಳದಿಂದಲೂ ಗಾತ್ರದಿಂದಲೂ ಜನಜನಿತವಾಗಿತ್ತು.

ಒಂದು ದಿನ ಅದು ಮುರಿದು ಬಿತ್ತು.

ನೋಡಿದ ಜನ " ಇಷ್ಟು ದಿನ ಇದರ ಒಳಗೆ ಇಷ್ಟು ದೊಡ್ಡ ಟೊಳ್ಳು ಇದೆಯೆಂದು ಅಂದುಕೊಂಡಿರಲಿಲ್ಲ " ಎಂದರು.

ತಿಮ್ಮ ಯೋಚಿಸಿದ - "ಮರ ಹೇಳಿಕೊಳ್ಳುವುದಿಲ್ಲ. ಮನುಷ್ಯರು ಹೇಳಿಕೊಳ್ಳುತ್ತಾರೆ "
*
✍️ಕಾಜೂರು ಸತೀಶ್

No comments:

Post a Comment