ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, July 4, 2023

ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'

'ಶಕ್ತಿ' ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಅವರ ಪತ್ರಿಕಾ ರಂಗದ ಅನುಭವ ಕಥನ 'ಸೊಡರು'. ಪತ್ರಿಕಾ ರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ; ತಮ್ಮ ಹದಿನೇಳನೆಯ ವಯಸ್ಸಿಗೇ ಈ ಕ್ಷೇತ್ರವನ್ನು ಪ್ರವೇಶಿಸಿದವರು ಅನಂತಶಯನ ಸರ್. ಅದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. UNI, ವಿಜಯ ಟೈಮ್ಸ್, ಸ್ಟಾರ್ ಆಫ್ ಮೈಸೂರ್, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು.
ಈ ಸುದೀರ್ಘ ಅವಧಿಯ ಕೆಲವು ರೋಚಕ ಅನುಭವಗಳನ್ನು
'ಸೊಡರು' ಕೃತಿಯಲ್ಲಿ ಬೆಳಗಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಬರುವವರಿಗೆ ಇದು ದಿಕ್ಸೂಚಿ .ಅದರಿಂದ ಹೊರತಾದವರಿಗೂ ರೋಚಕ ಅನುಭವಗಳ ಗುಚ್ಛ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದಾದ ಕೃತಿ.


ಪತ್ರಕರ್ತನಿಗಿರಬೇಕಾದ ಮಾನಸಿಕ ದೂರ, ವಿಷಯ ಜ್ಞಾನ, ಬಹುಭಾಷಾ ಅರಿವು, ಪ್ರಾಮಾಣಿಕತೆ , ನಿಖರತೆ, ಧೈರ್ಯ ,ತಾಳ್ಮೆ , ಸ್ವಾಭಿಮಾನ ಮೊದಲಾದ ವಿಷಯಗಳ ಕುರಿತ ಅನುಭವ ಕಥನಗಳಿವು.

ಸ್ವತಃ ಅನುಭವಿಸಿದ ಜೀವ ಬೆದರಿಕೆಗಳು, ಪ್ರಾಣಾಪಾಯದಿಂದ ಪಾರಾಗಿ ಬಂದ ಅನುಭವ, ಪೊಲೀಸ್ ವಿಚಾರಣೆ, ನ್ಯಾಯಾಲಯದಲ್ಲಿ ಹಾಜರಾದ ವಿವರಗಳು, ವರದಿಗಾಗಿ ಗಣ್ಯರ ಭೇಟಿಯ ಸಂದರ್ಭದ ಸ್ವಾರಸ್ಯಗಳು ಕೃತಿಯಲ್ಲಿವೆ. ಕನ್ನಡ ಪತ್ರಿಕಾ ಇತಿಹಾಸದ ಕುರಿತ ಸಣ್ಣ ಟಿಪ್ಪಣಿಗಳಿವೆ.
*
ಕಾಜೂರು ಸತೀಶ್

No comments:

Post a Comment