ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 16, 2025

ಏಕಲವ್ಯ

ಗುರುಗಳು ಏಕಲವ್ಯನನ್ನು ಮರಕ್ಕೆ ಕಟ್ಟಿಹಾಕಿ ಶಿಷ್ಯಂದಿರಲ್ಲಿ ''ನಿಮಗೇನು ಕಾಣಿಸುತ್ತಿದೆ ಮಕ್ಕಳೇ'' ಕೇಳಿದರು.

ಮಂತ್ರಿಯ ಮಗ ಹೇಳಿದ "ನನಗೆ ಅವನ ಕಿಡ್ನಿ ಕಾಣಿಸುತ್ತಿದೆ ಗುರುಗಳೇ"

"ಭೇಷ್" ಗುರುಗಳೆಂದರು.

"ನನಗವನ ಬಿಲ್ಲು ಕಾಣಿಸುತ್ತಿದೆ ಗುರುಗಳೇ", ಅಧಿಕಾರಿಯ ಮಗ ಹೇಳಿದ.

ಭೇಷ್" ಗುರುಗಳೆಂದರು.

"ನನಗವನ ಎರಡು ಹೆಬ್ಬೆರಳುಗಳಲ್ಲಿ ಒಂದು ಮಾತ್ರ ಕಾಣಿಸುತ್ತಿದೆ ಗುರುಗಳೇ" ಕೂಲಿಕಾರ್ಮಿಕನ ಮಗ ಹೇಳಿದ.

ಗುರುಗಳು ಕೆಂಡಾಮಂಡಲರಾದರು!
*
ಕಾಜೂರು ಸತೀಶ್

No comments:

Post a Comment