'ಊರಿಗೆ ನೀರಿಲ್ಲ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.
'ವಿದ್ಯುತ್ ಇಲ್ಲದೆ ತಿಂಗಳಾಯಿತು' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.
'ರಸ್ತೆಯಲ್ಲಿ ಹೊಂಡಗಳಿವೆ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.
'ಕಚೇರಿಯ ಈ ಕಡತ ವರ್ಷಗಳಿಂದ ಬಾಕಿ ಇದೆ' ಎಂದರು ಜನ. 'ಹೋರಾಡಿ' ಎಂದಿತು ಅಶರೀರವಾಣಿ.
*
ಮಗುವೊಂದು ಸುಮ್ಮನೆ ಮಲಗಿತ್ತು. ಅದಕ್ಕೆ ಹಸಿದಿತ್ತು.ಅದು ಅಳಲಿಲ್ಲ.
ಸತ್ತು ಹೋಯಿತು!
*
ಕಾಜೂರು ಸತೀಶ್
No comments:
Post a Comment