ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 16, 2025

ಇಲ್ಲ


'ಊರಿಗೆ ನೀರಿಲ್ಲ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ವಿದ್ಯುತ್ ಇಲ್ಲದೆ ತಿಂಗಳಾಯಿತು' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ರಸ್ತೆಯಲ್ಲಿ ಹೊಂಡಗಳಿವೆ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ಕಚೇರಿಯ ಈ ಕಡತ ವರ್ಷಗಳಿಂದ ಬಾಕಿ ಇದೆ' ಎಂದರು ಜನ. 'ಹೋರಾಡಿ' ಎಂದಿತು ಅಶರೀರವಾಣಿ.
*
ಮಗುವೊಂದು ಸುಮ್ಮನೆ ಮಲಗಿತ್ತು. ಅದಕ್ಕೆ ಹಸಿದಿತ್ತು.ಅದು ಅಳಲಿಲ್ಲ.
ಸತ್ತು ಹೋಯಿತು!
*
ಕಾಜೂರು ಸತೀಶ್ 

No comments:

Post a Comment