ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 16, 2025

ಬೆಳಕು

ನಗರಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಒಂದು ತಿಂಗಳಾದರೂ ಬರಲೇ ಇಲ್ಲ.

ಜನರು ಹಳ್ಳಿಗೆ ಬಂದರು.

ಅಲ್ಲಿ ವಿದ್ಯುತ್ ಸ್ಥಗಿತಗೊಂಡು ಒಂದು ವರ್ಷವಾಗಿತ್ತು. ಜನ ಅರಳಿ ಕಟ್ಟೆಯನ್ನು ಸೃಷ್ಟಿ ಮಾಡುತ್ತಿದ್ದರು ಅರೆವ ಕಲ್ಲಿಗೆ ಮುಳ್ಳು ಹಾಕಿಸುತ್ತಿದ್ದರು ಕೆಲವರು ರೇಡಿಯೋ ಕೇಳುತ್ತಿದ್ದರು 'ಕಥೆ ಹೇಳಪ್ಪಾ' ಮಗು ಕೇಳುತ್ತಿತ್ತು.
*
ಕಾಜೂರು ಸತೀಶ್

No comments:

Post a Comment