ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 16, 2025

ಧ್ಯಾನ

ನಗರದಲ್ಲಿ ಧ್ಯಾನಿಸುತ್ತಾ ಕವಿ ನಡೆದ.
ಯಾರೂ ಅವನ ಧ್ಯಾನವನ್ನು ಕೆಡಿಸಲಿಲ್ಲ.

ಕವಿ ಹಳ್ಳಿಯ ಜನನಿಬಿಡ ಪ್ರದೇಶದಲ್ಲಿ ನಡೆಯತೊಡಗಿದ.
ನೂರು ಕಣ್ಣುಗಳು ಅವನ ಮೇಲೆರಗಿ ಅವನ ಧ್ಯಾನಕ್ಕೆ ಭಂಗವಾಯಿತು.

ಕವಿ ದಿನಚರಿಯಲ್ಲಿ ಹೀಗೆ ಬರೆದ: 'ಧಾವಂತ ಇಲ್ಲದಿದ್ದಾಗ ಜನ ತಮ್ಮನ್ನು ಮರೆಯುತ್ತಾರೆ, ಪರರ ಬಗ್ಗೆ ಚಿಂತಿಸುತ್ತಾರೆ'.
*
ಕಾಜೂರು ಸತೀಶ್

No comments:

Post a Comment