ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, January 16, 2025
ಧ್ಯಾನ
ನಗರದಲ್ಲಿ ಧ್ಯಾನಿಸುತ್ತಾ ಕವಿ ನಡೆದ.
ಯಾರೂ ಅವನ ಧ್ಯಾನವನ್ನು ಕೆಡಿಸಲಿಲ್ಲ.
ಕವಿ ಹಳ್ಳಿಯ ಜನನಿಬಿಡ ಪ್ರದೇಶದಲ್ಲಿ ನಡೆಯತೊಡಗಿದ.
ನೂರು ಕಣ್ಣುಗಳು ಅವನ ಮೇಲೆರಗಿ ಅವನ ಧ್ಯಾನಕ್ಕೆ ಭಂಗವಾಯಿತು.
ಕವಿ ದಿನಚರಿಯಲ್ಲಿ ಹೀಗೆ ಬರೆದ: 'ಧಾವಂತ ಇಲ್ಲದಿದ್ದಾಗ ಜನ ತಮ್ಮನ್ನು ಮರೆಯುತ್ತಾರೆ, ಪರರ ಬಗ್ಗೆ ಚಿಂತಿಸುತ್ತಾರೆ'.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment