ಕಾಡಿನಲ್ಲಿ ತೇಗದ ಮರಗಳನ್ನು ಮಾತ್ರ ನೆಡಲಾಗಿತ್ತು.
ಧ್ಯಾನಕ್ಕೆ ಒಂದು ಮರವೂ ಸಿಗದಿದ್ದಾಗ ಬುದ್ಧ ಯೋಚಿಸಿದ : ಪ್ರಗತಿಪರರು ಮರ, ಪ್ರಾಣಿ ಎಂದರೆ ಉರಿದು ಬೀಳುತ್ತಾರೆ. 'ಮನುಷ್ಯರು ಅಷ್ಟೇ' ಎನ್ನುತ್ತಾರೆ. ಅವರ ವಿರೋಧಿಗಳು 'ದೇವರು ಅಷ್ಟೇ' ಎನ್ನುತ್ತಾರೆ. ಇವರಿಬ್ಬರೂ ಬದುಕಬೇಕಾದರೆ ನೆರಳು ಕೊಡುವ ಮರ ಬೇಕು ಎಂದು ನಾನು ಹೇಳಿದರೆ ನಡುವಿನಲ್ಲಿ ನನ್ನನ್ನು ನಿಲ್ಲಿಸಿ ಕಲ್ಲು ತೂರುತ್ತಾರೆ.
ಹೀಗೆ ಹೇಳಿ ಒಂದು ಅರಳೀ ಗಿಡವನ್ನು ನೆಟ್ಟು ಮತ್ತೆ ಅರಮನೆಗೆ ಹಿಂತಿರುಗಿದ.
ಎಲ್ಲಿಗೆ ಹೋಗಿದ್ದೆ ಎಂದು ಯಾರೂ ಕೇಳಲಿಲ್ಲ.
*
ಕಾಜೂರು ಸತೀಶ್
No comments:
Post a Comment