ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, January 11, 2025
ರದ್ದಿ
'ಕವಿತೆ ಬರೆಯುವುದು ಹೇಗೆ?' ಹುಡುಗನೊಬ್ಬ ತಿಮ್ಮನ ಬಳಿ ಬಂದು ಕೇಳಿದ. ತಿಮ್ಮ ಕವಿತೆಯ ಕುರಿತು ಹಲವು ಸಂಗತಿಗಳನ್ನು ಬಿಚ್ಚಿಟ್ಟ.
ತಿಮ್ಮ ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲವಾದರೂ ಪ್ರಾಸ ಎನ್ನುವುದು ಮಾತ್ರ ಸ್ಪಷ್ಟವಾಗಿ ಅರ್ಥವಾಗಿತ್ತು.
ಒಂದು ವಾರ ಕಳೆಯಿತು. ' ನನ್ನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವಿದೆ ನೀವು ತಪ್ಪದೆ ಬರಬೇಕು' ಹುಡುಗ ಆಹ್ವಾನ ಪತ್ರ ನೀಡಿ 'ಬಾಯ್ ಸರ್' ಎಂದು ಹೇಳಿ ಹೊರಟುಹೋಗಿದ್ದ.
*
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment