ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, October 20, 2020

ಭಕ್ತಿ

ದೇಶಭಕ್ತಿಯ ಕುರಿತು , ನಾಡು ನುಡಿಯ ಕುರಿತು ಘೋಷಣೆಗಳನ್ನು ಕೂಗಲು ಮತ್ತು ಆ ಕುರಿತು ಭಾಷಣ ಮಾಡಲು ಅವರು ಬೇರೆ ಬೇರೆ ಕಡೆಗಳಿಗೆ ಹೋಗುತ್ತಿದ್ದರು. ಒಂದು ದಿನವೂ ಅವರಿಗೆ ಬಿಡುವಿರುತ್ತಿರಲಿಲ್ಲ.

ತಿಂಗಳ ಕಡೆಯ ದಿನ ಕಚೇರಿಗೆ ಹೋಗಿ ಆ ತಿಂಗಳ ಸಹಿ ಮಾಡುವುದನ್ನು ಮಾತ್ರ ಅವರು ಮರೆಯುತ್ತಿರಲಿಲ್ಲ. ಸಂಬಳ ಬಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಎಲ್ಲರಿಗಿಂತ ಮೊದಲು ಇವರಿಂದಲೇ ಆಗುತ್ತಿತ್ತು. ಒಂದು ವೇಳೆ ತಡವಾದರೆ ಪ್ರತಿಭಟನೆಯ ಮುಂದಾಳತ್ವವನ್ನು ಇವರೇ ವಹಿಸಿಕೊಳ್ಳುತ್ತಿದ್ದರು.
*


ಕಾಜೂರು ಸತೀಶ್

No comments:

Post a Comment