ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, October 4, 2025

ಗುಂಡಿ

ಗುಂಡ ರಸ್ತೆಯ ಗುಂಡಿಯಲ್ಲಿ ಹೂತುಹೋದ. ಅವನ ಸಹೋದರ ತಿಮ್ಮ "ನನ್ನ ತಮ್ಮನನ್ನು ಎತ್ತಲು ಸಹಕರಿಸಿ" ಎಂದು ಗೋಗರೆದ. ಯಾರೂ ಬರಲಿಲ್ಲವಾದ್ದರಿಂದ ಗುಂಡ ಸತ್ತುಹೋದ.

'ರಾಜನಿಗೆ ಇದು ಮುಜುಗರದ ವಿಷಯ' ಎಂದು ಹಲವರು ಮಾತನಾಡಿಕೊಂಡರು. ಇದು ರಾಜನ ಕಿವಿಗೂ ಬಿದ್ದ ಕಾರಣ ರಾಜ ಹೆಲಿಕಾಪ್ಟರ್ ನಲ್ಲಿ ಬಂದು ಘಟನಾ ಸ್ಥಳವನ್ನು ವೀಕ್ಷಿಸಿ ಹೋದ.
*
ಕಾಜೂರು ಸತೀಶ್

No comments:

Post a Comment