ಅವನ ಅಕ್ಕ ತಿಮ್ಮಿ ಬುದ್ಧಿವಂತೆ. ಮನೆಯ ಕೆಲಸಗಳನ್ನು ಮಾಡುತ್ತಲೇ ತರಗತಿಯಲ್ಲಿ ಸದಾ ಮುಂದೆ ಇದ್ದಳು.
ತಿಮ್ಮಿಯನ್ನು ಕಾಲೇಜು ಬಿಡಿಸಿ ಕೂಲಿ ಕೆಲಸಕ್ಕೆ ಹಾಕಿದರು.
ಗುಂಡ ಹೇಗೋ ಓದಿ ಮುಂದೆ ನಾಗರಿಕ ಸೇವೆಯ ಹುದ್ದೆಯನ್ನು ಗಿಟ್ಟಿಸಿಕೊಂಡ. ಆಗಲೂ ತಪ್ಪಿಲ್ಲದೆ ಓದಲು, ಬರೆಯಲು ಅವನು ಕಲಿತಿರಲಿಲ್ಲ. ಅವನಿಗೆ ಏಸಿ ಕೊಠಡಿ ಅಷ್ಟಾಗಿ ಒಗ್ಗುತ್ತಿರಲಿಲ್ಲವಾದರೂ ಅಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದ್ದ.
ತಿಮ್ಮಿ ಪುಸ್ತಕ ಓದುವುದನ್ನೇ ನಿಲ್ಲಿಸಿದಳು. ಕೂಲಿ ಕೆಲಸ ಮಾಡುತ್ತಲೇ ಸತ್ತುಹೋದಳು.
ಸಹಿ ಮಾಡಲು ಹಸಿರು ಪೆನ್ನನ್ನು ಬಳಸುವುದನ್ನು ಬಿಟ್ಟರೆ ಗುಂಡನೂ ಓದುವುದನ್ನು ನಿಲ್ಲಿಸಿದ.
ಹತ್ತು ಪದವಿಗಳನ್ನು ಪಡೆದಿದ್ದ ನೆರೆಮನೆಯ ತಿಮ್ಮ ವಿದೇಶದಲ್ಲಿ ಹೋಟೆಲ್ ಕೆಲಸಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ.
*
✍️ ಕಾಜೂರು ಸತೀಶ್
No comments:
Post a Comment