ಇದು 'ಮಾನವ ರಕ್ಷಣಾ ಸಂಘ'ದ ಕಣ್ಣಿಗೆ ಬಿತ್ತು. "ಇದು ಅತ್ಯಂತ ಹೇಯವಾದ ಪರಿಸ್ಥಿತಿ... ಹುಡುಗ ವ್ಯಾಪಾರ ಮಾಡುವುದು ತಪ್ಪು'' ಎನ್ನುತ್ತಾ ಆ ಹುಡುಗನನ್ನು ಅವನ ಮನೆಗೆ ಬಿಟ್ಟು, ಪಟ ತೆಗೆದು, ವಿಡಿಯೋ ಮಾಡಿ ಹೊರಟುಹೋದರು.
ಅಜ್ಜಿಯ ಪಿತ್ತ ನೆತ್ತಿಗೇರಿ ''ಅಷ್ಟು ಕಾಳಜಿ ಇದ್ರೆ ದುಡ್ಡು ಕೊಡ್ಬೇಕು, ದುಡಿಯೋದನ್ನ ನಿಲ್ಸೋದಲ್ಲ, ಬಡ್ಡಿ ಮಕ್ಳು'' ಮಲಗಿದ್ದಲ್ಲೇ ಕಿರುಚಲಾರಂಭಿಸಿದಳು.
ಫೋಟೋದಲ್ಲಿರುವ ಅಪ್ಪ ಏನೂ ತಿಳಿಯದೆ ಸುಮ್ಮನೆ ನೋಡುತ್ತಿದ್ದರು.
*
✍️ ಕಾಜೂರು ಸತೀಶ್
No comments:
Post a Comment