ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 22, 2024

ಅಭಿಪ್ರಾಯ

ರಾಜನು ಸಭೆ ಕರೆದು ತನ್ನ ಸಾಧನೆಗಳನ್ನು ವಿವರಿಸತೊಡಗಿದನು. ತಾನಿನ್ನು ಹೂವಿನ ರಸ್ತೆಯನ್ನು ನಿರ್ಮಿಸಬೇಕೆಂದಿದ್ದೇನೆ ಎಂದನು. ಆ ಕುರಿತು ಪ್ರತಿಯೊಬ್ಬರ ಬಳಿ ಅಭಿಪ್ರಾಯ ಕೇಳಿದನು. ಎಲ್ಲರೂ 'ಅತ್ಯುತ್ತಮ ನಿರ್ಧಾರ' ಎಂದರು.
ತಿಮ್ಮನ ಸರದಿ ಬಂದಾಗ ' ಅಷ್ಟೆಲ್ಲಾ ಹೂವುಗಳನ್ನು ಕಿತ್ತರೆ ಹಕ್ಕಿಗಳ, ಚಿಟ್ಟೆಗಳ ಆಹಾರ ಕಸಿದಂತಾಗುವುದಿಲ್ಲವೇ? ಬೇಸಿಗೆಯಲ್ಲಿ ಬಾಡುವುದಿಲ್ಲವೇ? ಮಳೆಗಾಲದಲ್ಲಿ ಕೊಚ್ಚಿಹೋಗುವುದಿಲ್ಲವೇ?' ಎಂದನು.

ಅಂದಿನಿಂದ ತಿಮ್ಮನಿಗೆ ಗೆಳೆಯರು ಇಲ್ಲವಾದರು. ಅವರು ಮಾಡಬೇಕಾಗಿದ್ದ ಅಷ್ಟೂ ಕೆಲಸಗಳು ಅವನ ಹೆಗಲಿಗೇರಿದವು.
*
✍️ಕಾಜೂರು ಸತೀಶ್

No comments:

Post a Comment