ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 22, 2024

ಸುಖೀ ರಾಜ್ಯ

ರಾಜನಿಗೆ ತನ್ನ ರಾಜ್ಯವು ಸುಖೀ ರಾಜ್ಯವಾಗಿದೆ ಎಂದು ಜಗತ್ತಿಗೆ ನಿರೂಪಿಸಬೇಕಿತ್ತು. ಅದಕ್ಕಾಗಿ ಪ್ರಜೆಗಳೆಲ್ಲರೂ ಬೀದಿ ಬೀದಿಗಳಲ್ಲಿ ಒಂದು ಗಂಟೆ ಹಸನ್ಮುಖಿಯಾಗಿ ನಿಲ್ಲಬೇಕೆಂದು ಬಯಸಿದ.

ಆದರೆ ಜನ ಅಲ್ಲಿಗೆ ಬರದಿದ್ದರೆ? ಅದಕ್ಕಾಗಿ ಗೈರುಹಾಜರಾಗುವ ಮಂದಿಯ ಕಾಲು ಮುರಿಯುವ ಯೋಜನೆಯನ್ನು ಗುಪ್ತವಾಗಿ ಮಾಡಿದ. ಆ ಸುದ್ದಿ ಎಲ್ಲರಿಗೂ ತಲುಪುವಂತೆ ನೋಡಿಕೊಂಡ.

ಭಯದಿಂದಾಗಿ ಎಲ್ಲ ಪ್ರಜೆಗಳೂ ಭಾಗಿಯಾಗಿದರು.

ನೆರೆಯ ದೇಶದ ಪ್ರವಾಸಿಗ ಫೀಯೆನ್ ಚೌ, ಇಲ್ಲಿಯ ಜನರೆಲ್ಲರೂ ನಗುನಗುತ್ತಾ ಇರುವುದನ್ನು ಗಮನಿಸಿ ತನ್ನ ಕೃತಿ 'ಬಿಯುಕಿ'ಯಲ್ಲಿ ದಾಖಲಿಸಿದ.

ರಾಜ ವಿಶ್ವವಿಖ್ಯಾತನಾದ.
*
✍️ಕಾಜೂರು ಸತೀಶ್

No comments:

Post a Comment