ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 6, 2024

ಕಣ್ಣಲ್ಲಿಳಿದ ಮಳೆಹನಿಯ ಕುರಿತು ರಾಜು ಸರ್

ಎಲ್ಲಾ ಕವಿತೆಗಳೂ ಹೀಗೆ. ತಮ್ಮ ಪಾಡಿಗೆ ತಾವೇ ಹಾಡಿಕೊಳ್ಳುಬಹುದಾದ, ಏಕಾಂತಕ್ಕೆ ತನುಕೊಟ್ಟಂತೆ.
ಬರೆದವರೇ ಹೇಳುವಂತೆ:
ಅಳುವವರ ಅಳುವಲ್ಲಿ ಹರಿದು ಕಡಲ ಸೇರುವುದಾದರೆ ಎಷ್ಟು ಚೆಂದ ಎಷ್ಟು ಚೆಂದ

ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿನ ಕವಿತೆಗಳೆಷ್ಟು ಕಾಡಬಲ್ಲವೋ,ಕವಿಯೂ ಹಾಗೆ ಕಾಡಬಲ್ಲ. ಅದೆಷ್ಟು ಕವಿತೆಯ ವ್ಯಾವೋಹ ಇರಬಹುದು, ಅದೆಷ್ಟು ವ್ಯಾಪಕವಾಗಿ ಅವರನ್ನು ವ್ಯಾಪಿಸಿರಬಹುದು. ಪದ ,ಮೌನ ,ಹುಡುಕಾಟ, ಸುತ್ತಾಟ ,ಕೋಪ ಕವಿತೆಯೊಳಗೆ ನಾನು ಜೀವಿಸಿದ್ದೆನೆ ಎಂದು ಹೇಳುವಷ್ಟು ಮಾತುಗಾರ. ಇವೆಲ್ಲವೂ ಸತೀಶ್ ರನ್ನು ಕವಿತೆಗಳೊಟ್ಟಿಗೆ 'ಕವಿ'ಯನ್ನೂ ನಮಗೆ ಪರಿಚಯಿಸುತ್ತವೆ. ಎಲ್ಲಾ ಕವಿತೆಗಳು ಹೊಸ ಜಾಯಮಾನಕ್ಕೆ ತಕ್ಕ ಎನ್ನಬಹುದಾದ ಅನೂಹ್ಯ ಬೆಳವಣಿಗೆಯಾಗಿದೆ. ಹೊಸ ರೀತಿಯ ಕವಿತೆಗಳನ್ನು ಓದಿಸಿದ ಸಂಗಾತದವರಿಗೂ, ಹೊಸ ಪುಸ್ತಕವನ್ನು ಪದೇ ಪದೇ ಕೊಟ್ಟು ಓದಿಸುವ Krishna Chengadi ಅಣ್ಣನವರಿಗೂ ರಾಶಿ ಧನ್ಯವಾದಗಳನ್ನಷ್ಟೇ ನಾನಿಲ್ಲಿ ಹೇಳಬಹುದು .

ಯಾರ ತಿಂದು ಬದುಕುತ್ತವೆ ನನ್ನ ಕವಿತೆಗಳು ನಾನು ಸತ್ತ ಮೇಲೆ
ಯಾರ ಕಣ್ಣೀರ ಪೇಯ ಅವುಗಳಿಗೆ ನಾನು ಸತ್ತ ಮೇಲೆ
*


✍️ ರಾಜು

No comments:

Post a Comment