ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 14, 2020

ಹಸಿವು



ಹಸಿವು ಅವನನ್ನು ಘಾಸಿಗೊಳಿಸಿತ್ತು. ಅಂತಹ ಸಂದರ್ಭಗಳಲ್ಲಿ ಕಾಡುಹಣ್ಣುಗಳನ್ನು ತಿಂದು ನೀರು ಕುಡಿದು ಹೇಗೋ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ.

ಒಂದಷ್ಟು ಓದಿಕೊಂಡಿದ್ದ. ಕೆಲಸ ಸಂಪಾದನೆಯೇ ಪರಮ ಗುರಿಯಾಗಿಸಿಕೊಂಡ. ಒಂದು ದಿನ ಅದನ್ನು ಸಾಧಿಸಿದ.

ಒಳ್ಳೆಯ ಸಂಬಳ. ಆದರೆ ಬಿಡುವಿರದ ಕೆಲಸ. ಮಧ್ಯಾಹ್ನದ ಊಟಕ್ಕೆ ಸಮಯವಿರುತ್ತಿರಲಿಲ್ಲ. ಬೆಳಿಗ್ಗೆ , ರಾತ್ರಿಯ ಊಟವೂ ನೆಮ್ಮದಿಯಿಂದ ಆಗುತ್ತಿರಲಿಲ್ಲ.

ಒಂದು ದಿನ ಹಸಿವು ತಾಳಲಾರದೆ ತೀರಿಕೊಂಡ.
*




ಕಾಜೂರು ಸತೀಶ್ 

No comments:

Post a Comment