ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 15, 2020

ಹಸಿರು



ಪ್ರಖ್ಯಾತ ಕವಿ ಮತ್ತು ಕತೆಗಾರ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದವರು ಅಲ್ಲಿಯೇ ಮನೆಕಟ್ಟಿ ಬದುಕಿಕೊಂಡಿದ್ದರು.

ಅವರನ್ನು ಜನ 'ಹಸಿರು ಕವಿ' ಎಂದೇ ಕರೆಯುತ್ತಿದ್ದರು . ಪರಿಸರದ ಕುರಿತ ಕಾಳಜಿಗಳು ಅವರ ಕೃತಿಗಳಲ್ಲಿ ತುಂಬಿತುಳುಕುತ್ತಿದ್ದವು.

ಮರಗಳ ರಕ್ಷಣೆಗೆ ಸಂಬಂಧಿಸಿದ, ಕಾಡಿನ ಕುರಿತು ಬರೆದ ಅವರ ಕೃತಿಗಳು ದಾಖಲೆಯ ಪ್ರಮಾಣದಲ್ಲಿ ಮರುಮುದ್ರಣವಾಗುತ್ತಲೇ ಹೋದವು.

ಕಡೆಗೆ ಕಾಡಾನೆಗಳು ಊರ ಕಡೆಗೆ ಧಾವಿಸಿದವು!
*


ಕಾಜೂರು ಸತೀಶ್

No comments:

Post a Comment