ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 27, 2020

ಗಡಿಪಾರು



ದಿನಕಳೆದಂತೆ ರಾಜನು ಕವಿತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದ. ಮೊದಮೊದಲು ಹಾಡುಕಟ್ಟುತ್ತಿದ್ದ ಈ ಕವಿಗಳು ಈಗ ಏನೇನೋ ಬರೆಯುತ್ತಿದ್ದಾರೆ. ಅದು ಬೈಗುಳವೋ ಹೊಗಳಿಕೆಯೋ ತಿಳಿಯದೆ ದ್ವಂದ್ವದಲ್ಲಿದ್ದ ರಾಜ ಕೃಶವಾಗುತ್ತಾ ಹೋದ.

ಮಂತ್ರಿ ಹೇಳಿದ 'ಕವಿಗಳನ್ನು ಗಡಿಪಾರು ಮಾಡಿ ಅವರ ಸ್ಥಾನಕ್ಕೆ ಭಾಷಣಕಾರರನ್ನು ನೇಮಿಸೋಣ'.

ರಾಜನ ಮುಖದಲ್ಲಿ ಗೆಲುವು ಕಾಣಿಸಿತು.
*


ಕಾಜೂರು ಸತೀಶ್

No comments:

Post a Comment