ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 26, 2020

ಕೊಂಬೆ


ರಾಜನಿಗೆ ಹಕ್ಕಿಗಳ ದನಿಯೆಂದರೆ ಇಷ್ಟವಾಗುತ್ತಿರಲಿಲ್ಲ. ತನ್ನ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ ಕೊಲ್ಲಿಸೋಣವೆಂದರೆ ಪ್ರಜೆಗಳ ವಿರೋಧವನ್ನು ಕಟ್ಟಿಕೊಳ್ಳಬೇಕಿತ್ತು.

ರಾಜ ಮಂತ್ರಿಗಳ ಮೊರೆಹೋದ. ಮಂತ್ರಿ ಸಲಹೆಯಿತ್ತ :'ಎಲ್ಲ ಕೊಂಬೆಗಳನ್ನು ಕಡಿಸಿಬಿಡೋಣ'.

ಬೆನ್ನು ತಟ್ಟಿದ ರಾಜ.
*


ಕಾಜೂರು ಸತೀಶ್

No comments:

Post a Comment