ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 27, 2020

ನೇಮಕಾತಿ

ರಾಜನಿಗೆ ಕವಿಗಳ ಬಗ್ಗೆ ಅಸಮಾಧಾನ. 'ಕವಿಗಳು ಒಳಗೊಂದು ಅರ್ಥ/ಭಾವವನ್ನಿಟ್ಟುಕೊಂಡು ಬರೆಯುತ್ತಾರೆ. ಮೇಲುನೋಟಕ್ಕೆ ಹೊಗಳಿದಂತೆ ಕಂಡರೂ ಅದರ ಒಳ ಅರ್ಥ ಬೇರೆಯೇ ಆಗಿರುತ್ತದೆ' ಎಂದು ಮಂತ್ರಿಗಳು ಹೇಳಿದ ಮೇಲೆ ಎಲ್ಲ ಕವಿಗಳನ್ನು ಗಡಿಪಾರು ಮಾಡಲು ರಾಜ ನಿರ್ಧರಿಸಿದ.

'ಹಾಗಾದರೆ ಇನ್ನು ನನ್ನ ಹೊಗಳುವವರಾರು?' ಕೇಳಿದ ರಾಜ.

'ಭಾಷಣಕಾರರನ್ನು ನೇಮಿಸೋಣ' ಹೇಳಿದ ಮಂತ್ರಿ .
*


ಕಾಜೂರು ಸತೀಶ್ 

No comments:

Post a Comment