ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, July 22, 2023

ಮಳೆಬಿಲ್ಲು



The Rainbow

  - Christina Rossetti

Boats sail in the rivers,
And ships sail on the seas;
But clouds that sail across the sky
Are prettier far than these.

There are bridges on the rivers,
As pretty as you please;
But the bow that bridges heaven,
And overtops the trees,
And builds a road from earth to sky,
Is prettier far than these.

 ಮಳೆಬಿಲ್ಲು

ದೋಣಿ ಸಾಗಿದೆ ನದಿಯ ನಾದಕೆ
ಹಡಗು ಸಾಗಿದೆ ಕಡಲ ಲಾಲಿಗೆ
ಇದಕೂ ಸುಂದರ ಗಗನ ಗಾನಕೆ  ಮೋಡದ ಸಾಲು

ಸೇತುವೆಗಳಿವೆ ನದಿಯ ಚೆಲುವಿಗೆ
ಎಷ್ಟು ಸುಂದರ ನರನ ಕಾಣಿಕೆ
ಆದರಿದೋ  ಮಳೆಯಬಿಲ್ಲು
ಸಪ್ತ ವರ್ಣದ ಕಾಮನಬಿಲ್ಲು 
ಸ್ವರ್ಗಕ್ಕೆ ಸೇತುವೆ ಕಟ್ಟಿ 
ಜಗಕೆ ಮುಡಿಸಿದೆ ಬೆರಗ ದೃಷ್ಟಿ 
ಮರದ ಮೇರೆಯ ಮೀರಿಮೀರಿ
ಭೂಮಿ-ಬಾನಿಗೆ ಮಾಡಿ ದಾರಿ 
 ಸಹಜ ಸೃಷ್ಟಿಯ ಚೆಲುವ ಗೆಲುವಿದು ಸುಂದರ ಅತಿ ಸುಂದರ
*
ಇಂಗ್ಲಿಷ್ ಮೂಲ- ಕ್ರಿಸ್ಟೀನಾ ರೊಸೆಟಿ


ಕನ್ನಡಕ್ಕೆ- ಕಾಜೂರು ಸತೀಶ್ 



Tuesday, July 4, 2023

ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'

'ಶಕ್ತಿ' ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಅವರ ಪತ್ರಿಕಾ ರಂಗದ ಅನುಭವ ಕಥನ 'ಸೊಡರು'. ಪತ್ರಿಕಾ ರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ; ತಮ್ಮ ಹದಿನೇಳನೆಯ ವಯಸ್ಸಿಗೇ ಈ ಕ್ಷೇತ್ರವನ್ನು ಪ್ರವೇಶಿಸಿದವರು ಅನಂತಶಯನ ಸರ್. ಅದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. UNI, ವಿಜಯ ಟೈಮ್ಸ್, ಸ್ಟಾರ್ ಆಫ್ ಮೈಸೂರ್, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು.
ಈ ಸುದೀರ್ಘ ಅವಧಿಯ ಕೆಲವು ರೋಚಕ ಅನುಭವಗಳನ್ನು
'ಸೊಡರು' ಕೃತಿಯಲ್ಲಿ ಬೆಳಗಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಬರುವವರಿಗೆ ಇದು ದಿಕ್ಸೂಚಿ .ಅದರಿಂದ ಹೊರತಾದವರಿಗೂ ರೋಚಕ ಅನುಭವಗಳ ಗುಚ್ಛ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದಾದ ಕೃತಿ.


ಪತ್ರಕರ್ತನಿಗಿರಬೇಕಾದ ಮಾನಸಿಕ ದೂರ, ವಿಷಯ ಜ್ಞಾನ, ಬಹುಭಾಷಾ ಅರಿವು, ಪ್ರಾಮಾಣಿಕತೆ , ನಿಖರತೆ, ಧೈರ್ಯ ,ತಾಳ್ಮೆ , ಸ್ವಾಭಿಮಾನ ಮೊದಲಾದ ವಿಷಯಗಳ ಕುರಿತ ಅನುಭವ ಕಥನಗಳಿವು.

ಸ್ವತಃ ಅನುಭವಿಸಿದ ಜೀವ ಬೆದರಿಕೆಗಳು, ಪ್ರಾಣಾಪಾಯದಿಂದ ಪಾರಾಗಿ ಬಂದ ಅನುಭವ, ಪೊಲೀಸ್ ವಿಚಾರಣೆ, ನ್ಯಾಯಾಲಯದಲ್ಲಿ ಹಾಜರಾದ ವಿವರಗಳು, ವರದಿಗಾಗಿ ಗಣ್ಯರ ಭೇಟಿಯ ಸಂದರ್ಭದ ಸ್ವಾರಸ್ಯಗಳು ಕೃತಿಯಲ್ಲಿವೆ. ಕನ್ನಡ ಪತ್ರಿಕಾ ಇತಿಹಾಸದ ಕುರಿತ ಸಣ್ಣ ಟಿಪ್ಪಣಿಗಳಿವೆ.
*
ಕಾಜೂರು ಸತೀಶ್