ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 24, 2024

ಪ್ರಶ್ನೆ

ರಾಜನು ಸಭೆ ಕರೆದು ತನ್ನ ಸಾಧನೆಗಳನ್ನು ವಿವರಿಸತೊಡಗಿದನು. ತಾನಿನ್ನು ಹೂವಿನ ರಸ್ತೆಯನ್ನು ನಿರ್ಮಿಸಬೇಕೆಂದಿದ್ದೇನೆ ಎಂದು ಹೇಳಿದನು. ಆ ಕುರಿತು ಪ್ರತಿಯೊಬ್ಬರ ಬಳಿ ಅಭಿಪ್ರಾಯ ಕೇಳಿದನು. ಎಲ್ಲರೂ 'ಅತ್ಯುತ್ತಮ ನಿರ್ಧಾರ' ಎಂದರು. ತಿಮ್ಮನ ಸರದಿ ಬಂದಾಗ ' ಅಷ್ಟೆಲ್ಲಾ ಹೂವುಗಳನ್ನು ಕಿತ್ತರೆ ಹಕ್ಕಿಗಳ, ಚಿಟ್ಟೆಗಳ ಆಹಾರ ಕಸಿದಂತಾಗುವುದಿಲ್ಲವೇ? ಬೇಸಿಗೆಯಲ್ಲಿ ಬಾಡುವುದಿಲ್ಲವೇ? ಮಳೆಗಾಲದಲ್ಲಿ ಕೊಚ್ಚಿಹೋಗುವುದಿಲ್ಲವೇ?' ಎಂದನು.

ಅಂದಿನಿಂದ ತಿಮ್ಮನಿಗೆ ಗೆಳೆಯರು ಇಲ್ಲವಾದರು. ಅವರೆಲ್ಲರೂ ಮಾಡಬೇಕಾಗಿದ್ದ ಕೆಲಸಗಳು ತಿಮ್ಮನ ಹೆಗಲಿಗೇರಿದವು.
*
ಕಾಜೂರು ಸತೀಶ್

No comments:

Post a Comment