ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 14, 2025

ಸೈನಿಕ

ಆ ಊರಿನಲ್ಲಿ ತಿಮ್ಮನೂ ಸೇರಿದಂತೆ ಹಲವು ಮಂದಿ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು.

ಒಬ್ಬರು ಗಡಿಯಲ್ಲಿ ಸತ್ತಾಗ ಮನೆಯ ಬಳಿ ಸುಮಾರು ಹತ್ತು ಸಾವಿರ ಮಂದಿ ಸೇರಿದರು.

ಒಬ್ಬರು ಹೃದಯಾಘಾತವಾಗಿ ತೀರಿಕೊಂಡಾಗ ಸುಮಾರು ಎರಡು ಸಾವಿರ ಮಂದಿ ಸೇರಿದರು.

ನಿವೃತ್ತಿಹೊಂದಿದ ಒಬ್ಬರು ತೀರಿಕೊಂಡಾಗ ಸಾವಿರ ಮಂದಿ ಸೇರಿದರು.

ಇವರೆಲ್ಲರ ಅಪ್ಪ ಅಮ್ಮ ಹೆಂಡತಿ ಮಕ್ಕಳು ಮಾತ್ರ ಒಂದೇ ಸಮ ಕಣ್ಣೀರು ಹಾಕಿದರು.
*
ಕಾಜೂರು ಸತೀಶ್

Saturday, January 11, 2025

ರದ್ದಿ

'ಕವಿತೆ ಬರೆಯುವುದು ಹೇಗೆ?' ಹುಡುಗನೊಬ್ಬ ತಿಮ್ಮನ ಬಳಿ ಬಂದು ಕೇಳಿದ. ತಿಮ್ಮ ಕವಿತೆಯ ಕುರಿತು ಹಲವು ಸಂಗತಿಗಳನ್ನು ಬಿಚ್ಚಿಟ್ಟ.

ತಿಮ್ಮ ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲವಾದರೂ ಪ್ರಾಸ ಎನ್ನುವುದು ಮಾತ್ರ ಸ್ಪಷ್ಟವಾಗಿ ಅರ್ಥವಾಗಿತ್ತು.

ಒಂದು ವಾರ ಕಳೆಯಿತು. ' ನನ್ನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವಿದೆ ನೀವು ತಪ್ಪದೆ ಬರಬೇಕು' ಹುಡುಗ ಆಹ್ವಾನ ಪತ್ರ ನೀಡಿ 'ಬಾಯ್ ಸರ್' ಎಂದು ಹೇಳಿ ಹೊರಟುಹೋಗಿದ್ದ.
*
ಕಾಜೂರು ಸತೀಶ್