ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, August 14, 2020

ಕಡಲ ಕರೆ ಕೃತಿಯ ಕುರಿತು


ವಾಯಿದೆಗಳಿಲ್ಲದೆ ಈ ತಿಂಗಳ ಓದು ಸರ್ರನೆ ಪುಟಗಳು ಪಟಪಟನೆ ಅವಕ್ಕಾವಾಗಿಯೆ ಜಾರಿಕೊಳ್ಳುವಂತೆ ಓದಿನ ಸುದೀರ್ಘ ಸುಖವನ್ನು ಕೊಟ್ಟ ಈ ತಿಂಗಳಲ್ಲಿ ಬಹಳ ಇಷ್ಟವಾದ ಕವಿಯನ್ನು ತೇಗಿಸಿಕೊಂಡ ಒಂದೊಳ್ಳೆ ಸಂಕಲನದ ಬಗ್ಗೆ ಎಷ್ಟು ಮಾತನಾಡಿದರೂ ಸಾಕಾಗದು ,ಕತ್ತಲು ಹೆಪ್ಪುಗಟ್ಟಿದಂತೆ ರಾತ್ರಿಯೆಂಬ ನಾಮಕರಣ ಮಾಡಿ ಕತ್ತಲ ಮಂಪರಿನಲ್ಲೆ ನಿದ್ರೆಗೆ ಜಾರುವ ಹಲವು ಸಂಗತಿಗಳನ್ನು ಯಾವ ಬಗೆಯಲ್ಲಾದರೂ ಸೆರೆ ಹಿಡಿಯಬಹುದೇ ! ಖಂಡಿತ ಹಿಡಿಯಬಹುದೇನೋ, ಕವಿಯೊಬ್ಬ ತನ್ನ ಚೌಕಟ್ಟಿನಲ್ಲಿ ಪೋಟೊಗ್ರಾಪರ್ ಆಗಿ ತನ್ನ ಕೆಲಸವನ್ನು ಕಾದು ಸೆರೆಹಿಡಿದಂತೆ ಬರೆದು ಓದುಗನಿಗೆ ಒಂದು ವಿನ್ಯಾಸವನ್ನು ಕಟ್ಟುಕೊಟ್ಟ ಕವಿತೆಗಳನ್ನು ಓದುವುದೇ ಒಂದು ಅನುಭವ.
*


ರಾಜು ಬಿ.ಜಿ.

Sunday, August 2, 2020

ತಿಥಿ



ಆ ಮನೆಯಲ್ಲಿ ನಾಲ್ಕು ಮಂದಿ ವಾಸವಾಗಿದ್ದರು.

ಒಂದು ದಿನ ಮನೆಯ ಯಜಮಾನ ತೀರಿಕೊಂಡ.

ಸಾಲಮಾಡಿ ತಂದೆಯ ತಿಥಿ ಮಾಡಿದ ಮಗ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ.

ಈಗ ಆ ಮನೆ ಖಾಲಿಯಾಗಿದೆ.

ಮನೆಯ ಹಿಂಭಾಗದಲ್ಲಿ ನಾಲ್ವರ ಶವ ಸುಟ್ಟ ಗುರುತಿದೆ.
*


ಕಾಜೂರು ಸತೀಶ್