ಒಂಟಿ ಕಡಲಿನ ಒಡಲ ಒಳಗೆ
ನೂರು ನದಿಗಳ ಹಾಡಿದೆ
ನೂರು ಊರಿನ ಕತೆಯಿದೆ
ಆಳ ಮೌನದ ಮೇಲೆ ಮೇಲೆ
ನೂರು ತೆರೆಗಳ ಮಾತಿದೆ
ಪಾದ ಸೋಕುವ ಸುಖವಿದೆ
ತುಳಿದ ತೀರದ ಹೆಜ್ಜೆಹಚ್ಚೆಗೆ
ಉಳಿವ ನೆನಪಿನ ಕಲೆಯಿದೆ
ಉಳಿವ ಹಳೆಯ ಮರೆವಿದೆ
ನೋವ ಶವಗಳ ಇಟ್ಟುಕೊಳ್ಳದ
ಶುದ್ಧ ಮನಸಿನ ಕೈಯಿದೆ
ತೀರಕ್ಕೆಸೆಯುವ ಸುಖವಿದೆ
ತೆರೆದ ಹೃದಯದ ಬಾಗಿಲೊಳಗೆ
ಜಗದ ಮೈಯ ಬೆವರಿದೆ
ಕಣ್ಣು ಹರಿಸಿದ ಕತೆಯಿದೆ
*
ಕಾಜೂರು ಸತೀಶ್
No comments:
Post a Comment