ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, November 10, 2015

ದಿನಚರಿ-10

ಗುಂಪುಘರ್ಷಣೆಯಲ್ಲಿ ಸಾಯುವ ಪ್ರತಿಯೊಬ್ಬ ಅಮಾಯಕ ವ್ಯಕ್ತಿಯ ಮೇಲೆ ಅಪಾರ ಮರುಕವಾಗುತ್ತದೆ[ತತ್ವ ,ಸಿದ್ಧಾಂತ, ವರ್ಗಗಳ ಹಂಗಿಲ್ಲದೆ]. ಇವರನ್ನು ಬೀದಿಗಿಳಿಸಿ ಬೀದಿಪಾಲು ಮಾಡುವ ನೇತಾರರ ಮೇಲೆ ತೀರಿಸಲಾರದಷ್ಟು ಆಕ್ರೋಶ ಹುಟ್ಟುತ್ತದೆ.



ಇಂತಹ ಅಮಾಯಕರನ್ನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ. ಅವರಲ್ಲನೇಕರು ತೀರಿಕೊಂಡಿದ್ದಾರೆ. ಉಳಿದವರು ತಮ್ಮ ಮೈಮೇಲೆ ಹೇರಲಾಗಿರುವ ಆಪಾದನೆಗಳ ಪೊರೆ ಕಳಚಲು ಕೋರ್ಟು ಕಚೇರಿಗೆ ಅಲೆದೂ ಅಲೆದು ಈಗ ಸದ್ದೇ ಇಲ್ಲದ ಹಾಗೆ ಕೌಟುಂಬಿಕ ಚಕ್ರದ ಕೆಳಗಿನ ನೆಲವಾಗಿದ್ದಾರೆ.ಹೊಟ್ಟೆಪಾಡಿಗಾಗಿ ಬದುಕುವ ಇಂತಹ ಅಮಾಯಕರಿರುವವರೆಗೂ ರಕ್ಕಸರು ಸದ್ದಿಲ್ಲದೆ ಇವರ, ನೆಲದ ರಕ್ತ ಹೀರಲು ತೊಡಗುತ್ತಾರೆ.

ಅವತ್ತು ಯಾರನ್ನು ಬೆಂಬಲಿಸಿ ಬೀದಿಗಿಳಿದಿದ್ದರೋ,ಅದೇ ಮನುಷ್ಯ ಈಗ ಇವರೆದುರು ಅಪರಿಚಿತನಂತೆ ಅಧಿಕಾರದ ಅಮಲಿನ ಬಲದಿಂದ ಹಾಯಾಗಿ ಹಾದುಹೋಗುತ್ತಾನೆ.
**

-ಕಾಜೂರು ಸತೀಶ್

No comments:

Post a Comment