ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 1, 2015

ದಿನಚರಿ -1

ಈ ಚಿಂತನೆಗಳು ಅಕ್ಷರಗಳಾಗಿ ಹುಟ್ಟಿಕೊಳ್ಳುವಾಗ ಒಬ್ಬ ಕೂಲಿ ಕಾರ್ಮಿಕನಾಗಿರುತ್ತೇನೆ: ಬೆವರು ಧಾರಾಕಾರ ಜಿನುಗುತ್ತದೆ, ಹೃದಯ ಚಂಡೆಯಾಗಿರುತ್ತದೆ, ಕಣ್ಣುಗಳು ಅದ್ಯಾವುದೋ ಕೇಂದ್ರದ ದಾಸನಾಗಿರುತ್ತವೆ.



ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕ್ರಾಂತಿಕಾರಿ ಆಗುತ್ತಾನೆ. ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ನೇಣುಹಾಕಿಕೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಧೋ ಧೋ ಮಳೆ ಸುರಿಯುತ್ತದೆ. ಬಿಸಿಲು ಸುಟ್ಟೂ ಸುಡುತ್ತದೆ. ಎಲೆಯ ತೊಟ್ಟು ಕಳಚಿ ಭೂಮಿಯ ಪಾದ ಸೇರುತ್ತದೆ.

ಇದೇ ಸ್ಥಿತಿಯಲ್ಲಿಯೇ ಸಿದ್ದಾರ್ಥ ಬುದ್ಧನಾದದ್ದು!
**

-ಕಾಜೂರು ಸತೀಶ್

No comments:

Post a Comment