ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 6, 2024

ಕಾಮ

ಹುಟ್ಟಿಗೆ ಕಾರಣ ಕೇಳಿದಳು ತಿಮ್ಮಿ.
'ಕಾಮ' ಎಂದ ತಿಮ್ಮ.
ಹೌಹಾರಿದಳು ತಿಮ್ಮಿ
'ಹಾಗಾದರೆ ಪ್ರೀತಿ?'
'ಕಾಮ ಹುಟ್ಟಿದ ಮೇಲೆಯೇ ಪ್ರೀತಿಯ ಜನನ' ತಿಮ್ಮ ಹೇಳಿದ. 
*
ಕಾಜೂರು ಸತೀಶ್ 

ಆಸ್ತಿ ಘೋಷಣೆ

ತಿಮ್ಮ ಚುನಾವಣೆಯಲ್ಲಿ ಭಾಗವಹಿಸಲು ಆಸ್ತಿ ಘೋಷಣೆ ಮಾಡಿದ. ಇನ್ನೇನು ಚುನಾವಣೆ ಆರಂಭವಾಗುತ್ತದೆ ಎನ್ನುವಾಗ ಚಡ್ಡಿಯಲ್ಲೇ ಓಡಾಡುತ್ತಿದ್ದ ಅವನು ತನ್ನ ಬಳಿ ಒಂದೂ ಪ್ಯಾಂಟ್ ಇಲ್ಲವೆಂದು ಘೋಷಿಸಿದ. ಜನ ಅವನ ಪ್ಯಾಂಟನ್ನು ಹುಡುಕುವ ಗೋಜಿಗೆ ಹೋಗಲಿಲ್ಲ.
*
ಕಾಜೂರು ಸತೀಶ್