ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, February 5, 2022
ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು
'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.
Saturday, January 29, 2022
'ಕಣ್ಣಲ್ಲಿಳಿದ ಮಳೆಹನಿ' ಕುರಿತು ಮಣಜೂರುಶಿವಕುಮಾರ್
ಪ್ರೀತಿಯ ಸತೀಶ್ ಕಾಜೂರು ಸರ್ ರವರಿಗೆ,
ನಿಮ್ಮ ಹೊಸ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಪುಸ್ತಕ ಓದಿದೆ. ನನಗನ್ನಿಸಿದ ನಾಲ್ಕು ಸಾಲುಗಳು.
ಒಕ್ಕುಂದ ಸರ್ ಬರೆದಿರುವ ಹಾಗೆ ನಿಮ್ಮ ಸಾಲುಗಳಲ್ಲಿ ಭಾವವೇಶವಿಲ್ಲ, ಆದರೆ ಅನುಕ್ರೋಶವಿದೆ. ವ್ಯಕ್ತವಾಗಿರುವ ಪ್ರಕೃತಿ ಮೇಲಿನ ಪ್ರೀತಿ, ವಿಕೃತಿ ಮೇಲಿನ ಸಿಟ್ಟು ಎರಡು ಸೊಗಸು. ಪರಿಸರದ ಮತ್ತು ಕಂಡ ಅತಿ ಸೂಕ್ಷ್ಮ ಸಂಗತಿಗಳ ದೊಡ್ಡ ಆಲೋಚನಾ ಅಭಿವ್ಯಕ್ತಿ. ಸೂಕ್ಷ್ಮ ಸಂವೇದನೆಗಳು ಮೊದಲ ಪುಟದಿಂದ ಕೊನೆಯ ಪುಟದ ತನಕವೂ ಅನುಸಂಧಾನವಾಗಿವೆ.
ನಿಮ್ಮ ಕವಿತೆಗಳ ಹೊಸ ಆಲೋಚನೆ ಒಂದು ಕಾವ್ಯಸೃಷ್ಟಿಯ ಹೊಸ ಸಾಧ್ಯತೆ. ಅದ್ಭುತ ಕವಿತೆಗಳ ಹೂರಣ. ಆಗಾಗ ಮತ್ತೆ ಮತ್ತೆ ಪುಟಗಳನ್ನು ತೆರೆದು ನಾನೊಬ್ಬನೇ, ನನ್ನವರ ಮುಂದೆ ಓದಲು ಹಾತೊರೆಯುವಂತೆ ಮಾಡುವ ಶಕ್ತಿ ನಿಮ್ಮ ಕವಿತೆಗಳಿಗಿದೆ.
ಹೊಸತು ಆಲೋಚಿಸುವ, ಹೊಸತು ಸೃಷ್ಟಿಸುವ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿಮ್ಮ ಗುಣ ನಿರಂತರವಾಗಿರಲಿ.
ಶುಭಾಶಯಗಳು
*
ಶಿವಕುಮಾರ್ ಮಣಜೂರು
Subscribe to:
Posts (Atom)
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...

