ಅದಕ್ಕಾಗಿ ಕಂಡು ಕೇಳಿದ್ದನ್ನೆಲ್ಲ ಕಥೆ ಮಾಡಿಕೊಂಡು ಹುಮ್ಮಸ್ಸಿನಿಂದ ಸಿದ್ಧವಾಗುತ್ತಿದ್ದ . ಅಷ್ಟೇ ಕುತೂಹಲ ನಿಮ್ಮಿಗೆ. ಇವನ ಕರೆಗಾಗಿಯೇ ದೂರದೂರಿನಲ್ಲಿ ಕಾಯುತ್ತಿದ್ದಳು.
ಒಂದು ದಿನ ತುಸು ಹೆಚ್ಚೇ ಕಥೆಗಳನ್ನು ಹೊತ್ತು ತಂದಿದ್ದ. ಕರೆಮಾಡಿದ.
"ನನಗಿನ್ನು ನಿನ್ನ ಕಥೆಗಳು ಬೇಡ" ಎಂದಳು.
"ಯಾಕೆ" ಎಂದ ದಿಗ್ಭ್ರಾಂತನಾಗಿ .
" ನೀನು ಹೀಗೆ ಕಥೆಗಳನ್ನು ಹೇಳುತ್ತಿದ್ದರೆ ಅದಕ್ಕಾಗಿ ಕಾದೂ ಕಾದೂ ನನ್ನ ಮನಸ್ಸೂ ಕಥೆಯಾಗುತ್ತದೆ. ನಾವೂ ಕಥೆಯಾಗುತ್ತೇವೆ. ನಮಗೆ ನಮ್ಮದೇ ಆದ ಬದುಕು ಬೇಡವೇ?ಸ್ವಾತಂತ್ರ್ಯ ಬೇಡವೇ? " ಎಂದಳು.
ತಿಮ್ಮ ಕಥೆಯಾದ.
*
✍️ ಕಾಜೂರು ಸತೀಶ್
No comments:
Post a Comment