ಮೊದಮೊದಲು ಯಜಮಾನನಿಗೆ ತಿಮ್ಮನ ಮೇಲೆ ಅಭಿಮಾನ ಉಕ್ಕುತ್ತಿತ್ತು. ಆದರೆ ತಿಮ್ಮ ಬಹುಬೇಗ ಕೆಲಸವನ್ನು ಮುಗಿಸುತ್ತಿದ್ದುದರಿಂದ ಯಜಮಾನನು ಕ್ರಮೇಣ ನಾಲ್ಕು ಮೂಟೆಗಳನ್ನು ಒಟ್ಟಿಗೆ ಹೊರಿಸುತ್ತಿದ್ದನು. ಅದನ್ನೂ ಮಾಡಿದ ತಿಮ್ಮನ ಮೇಲೆ ಮತ್ತೆ ಸಿಟ್ಟು ಬಂದು ಐದು ಮೂಟೆಗಳನ್ನು ಹೊರಿಸುತ್ತಿದ್ದನು. ಅಲ್ಲಿಗೆ ತಿಮ್ಮನ ತಾಳ್ಮೆ ಮುಗಿದು ಯಜಮಾನನ ಕಪಾಳದಲ್ಲೊಂದು ಸೇಬುಹಣ್ಣು ಮೂಡಿಸಿ ಊರು ಬಿಡುತ್ತಿದ್ದನು.
ಇದು ಅವನ ದಿನಚರಿಯಾಗಿದ್ದರಿಂದ ತಿಮ್ಮ ಒಂಟಿಯಾಗಿಯೇ ಇದ್ದನು.
*
✍️ಕಾಜೂರು ಸತೀಶ್
No comments:
Post a Comment