ರಂಗಧಾಮಪ್ಪ ಸರ್ ಅವರಿಗೆ ನನ್ನ ಪರಿಚಯವಿಲ್ಲ. ಆದರೆ, 'ಆ ದಿನದ ಒಂದು ಫೋನ್ ಕಾಲ್' ಅವರ ಕುರಿತು ಬರೆಯುವಂತೆ ಮಾಡಿದೆ. ಜೂನ್ 28 2024. ನನ್ನ ಸುಡುವ ದನಿಗೆ ಅತ್ತಲಿಂದ ಬುದ್ಧನಂಥ ಉತ್ತರ. ಆಮೇಲೆ ನಾನು ಅಕ್ಷರಗಳಿಂದ ಇಲ್ಲಿನ ಅವ್ಯವಸ್ಥೆಯ ಕುರಿತು ಖಾರಿಕೊಂಡೆ. ಅವರಿಂದ ಮೌನದ ಸಾಥ್ ಸಿಕ್ಕಿತು. ನನ್ನ ಪರಿಚಯವಿಲ್ಲವೆಂದುಕೊಂಡು ಅವರು ಸುಮ್ಮನೆ ಇರಬಹುದಿತ್ತು. ಆದರೆ ' ಇದು ಯಾಕೆ ಹೀಗಾಗುತ್ತಿದೆ? ನೀವು ನನಗೆ ಉತ್ತರಿಸಿ' ಎಂದು ಸಮಸ್ಯೆಯ ಬುಡಕ್ಕೆ ತಮ್ಮ ಮೌನದಂಥ ಮಾತಿನ ಚಾಟಿಯನ್ನು ಬೀಸಿದ್ದರು. ವಿಚಾರವಂತರೂ, ನೀತಿವಂತರೂ ಆದ ಮನುಷ್ಯರಿಂದ ಮಾತ್ರ ಇದು ಸಾಧ್ಯ ಎಂದು ಆ ದಿನ ಅವರನ್ನು ನನ್ನೊಳಗೆ ಚಿತ್ರಿಸಿಕೊಂಡೆ.
ಮೊದಲ ಬಾರಿಗೆ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದು ಡಿಸೆಂಬರ್ 6, 2024ರಂದು. ಒಂದೊಂದು ಶಬ್ದದಲ್ಲೂ ಓದಿನ ಬಲವಿತ್ತು. ಮತ್ತೆ ಮೆಚ್ಚಿಕೊಂಡೆ!
ಆಮೇಲೆ ಹಲವು ಬಾರಿ ಅವರನ್ನು ನೋಡಿದೆ. ಮೊನ್ನೆ ಕೂಡ. ಆದರೆ ಮಾತನಾಡಬೇಕು ಎನಿಸಲಿಲ್ಲ.
*
ಪ್ರಾಮಾಣಿಕರನ್ನು ವರ್ಗಾಯಿಸಲಾಗುತ್ತದೆ. ಇವರನ್ನೂ ಈಗ ವರ್ಗಾಯಿಸಲಾಗಿದೆ. ಕೆಲಸ ಮಾಡುವವರಿಗೆ ಯಾವ ಊರಾದರೇನು? ಆದರೂ ನನ್ನೊಳಗಿನ ಒಂದುಕ್ಷಣದ ಬೆಳಗುವ ಬಯಕೆಗೆ ಅವರ ನೆನಪಿನ ಬತ್ತಿಯಿದೆ...
*
✍️ಕಾಜೂರು ಸತೀಶ್

No comments:
Post a Comment