'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು.
ಹಕ್ಕಿಯೊಂದು ಅಲ್ಲೇ ಸನಿಹದಲ್ಲಿದ್ದ ಹಣ್ಣಿನ ಮರದಿಂದ ಹಣ್ಣನ್ನು ಕಿತ್ತು ನೆರೆಯ ದೇಶಕ್ಕೆ ಹಾರಿಹೋಗಿ ತಿಂದ ಹಣ್ಣಿನ ಬೀಜವನ್ನು ಹಿಕ್ಕೆ ಹಾಕಿತು.
ಅದು ಮೊಳಕೆಯೊಡೆಯಿತು. ಅದು ಮರವಾಯಿತು. ಅದು ಹಣ್ಣುಕೊಟ್ಟಿತು...
'ಗಡಿಸಮಸ್ಯೆ'ಯ ಬಗ್ಗೆ ಚರ್ಚೆ ಸಾಗಿತ್ತು.
*
✍️ಕಾಜೂರು ಸತೀಶ್
No comments:
Post a Comment