ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, January 15, 2024

ಮಂತ್ರಿ

ನಡೆದೂ ನಡೆದೂ ಬಳಲಿದ ದೂರ ದೇಶದ ಮನುಷ್ಯನಿಗೆ ಮರವೊಂದು ಸಿಕ್ಕಿತು. ಆ ಬಟಾಬಯಲಿನಲ್ಲಿದ್ದ ವಿಶಾಲ ಒಂಟಿಮರದ ಕೆಳಗೆ ಕುಳಿತು ದಣಿವಾರಿಸಿಕೊಂಡ. ಅದರಲ್ಲಿ ಹೂಬಿಟ್ಟಿತ್ತು. ಮೊದಲ ಫಸಲಿನ ಸಂಭ್ರಮ ಆ ಮರಕ್ಕೆ. ಹಕ್ಕಿಗಳ ಕಲರವ.

ಕೆಲಕಾಲದ ಅನಂತರ ಮರದ ತುಂಬಾ ಹಣ್ಣುಗಳು! ಹೊಟ್ಟೆ ತುಂಬಾ ತಿಂದ. ಉಳಿದ ಹಣ್ಣುಗಳನ್ನು ಮಾರಲು ಇಟ್ಟ. ಅದನ್ನು ಕೊಳ್ಳಲು ಜನರ ನೂಕುನುಗ್ಗಲು.

ಆ ಬಯಲಿನ ಒಡೆಯನಾದ. ಹಣ್ಣು ಕೊಳ್ಳಲು ಬಂದ ಕೆಲವರು ಅವನ ಸೇವಕರಾಗಿ ಕೆಲಸಕ್ಕೆ ಸೇರಿಕೊಂಡರು. ಬಯಲ ತುಂಬೆಲ್ಲ ಆ ಗಿಡವನ್ನು ನೆಡಿಸಿದ.

ಮುಂದೆ ಅವನು ಮಂತ್ರಿಯಾದ.
*


ಕಾಜೂರು ಸತೀಶ್ 

No comments:

Post a Comment