ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, September 16, 2020

ಪ್ರಜಾಪ್ರಭುತ್ವ



ನಾಲ್ವರು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆಸರಿಗೆ ನಾಲ್ಕು ಜನರಿದ್ದರೂ ಅದರಲ್ಲೊಬ್ಬರು ರಾಜಕಾರಣಿಗಳ, ಅಧಿಕಾರಿಗಳ ಹಿಂದೆ ಹೋಗುತ್ತಿದ್ದರಿಂದ ಅವರಿಗೆ ಕೆಲಸದಿಂದ ವಿನಾಯಿತಿ ಸಿಕ್ಕಿತ್ತು.

ಮೊನ್ನೆ ಆ ಮೂವರಲ್ಲೊಬ್ಬರಿಗೆ ಲಘು ಹೃದಯಾಘಾತವಾದಾಗ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ.

ಇವರೂ ಬಂದಿದ್ದರು. 'ಹೇಗಿದ್ದೀರಿ' ಎಂದು ಕೇಳಿದೆ. ಕಟಕಟ ನಗುತ್ತಾ 'ಓ ಸೂಪರ್' ಎಂದರು!
*


ಕಾಜೂರು ಸತೀಶ್ 

No comments:

Post a Comment