ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, September 7, 2020

ರೋಸ್ಲಿನ್ ಟೀಚರ್

ಹೊಸ ಶಾಲೆ. ನಾಲ್ಕನೇ ತರಗತಿಯ ಮೊದಲ ಕಿರುಪರೀಕ್ಷೆ ಮುಗಿದು ಉತ್ತರ ಪತ್ರಿಕೆ ಹಿಡಿದುಕೊಂಡು ಬಂದಿದ್ದ ಟೀಚರ್ ' ಇಲ್ಲಿ ಸತೀಶ್ ಯಾರು?' ಎಂದು ಕೇಳಿ ಎದ್ದು ನಿಲ್ಲಿಸಿ 'ಭೇಷ್' ಎಂದಿದ್ದರು.

ರೋಸ್ಲಿನ್ ಟೀಚರ್ ನೆನ್ನೆ ತೀರಿಕೊಂಡ ಸುದ್ದಿ ಕೇಳಿದಾಗ ಈ ನೆನಪು ಬಂದು ಒಂದು ಕ್ಷಣ ತಲ್ಲಣಿಸಿದ್ದೆ. ಅವರಲ್ಲಿ ತಾಯ್ತನವಿತ್ತು. ಆ ಮುಗ್ಧ ನಗುವೊಂದೇ ಅವರ ವ್ಯಕ್ತಿತ್ವವನ್ನು ಹೇಳುತ್ತಿತ್ತು.


ನಾನು ಪ್ರೌಢಶಾಲೆಯಲ್ಲಿದ್ದಾಗ ಅವರಿಗೆ ಬೇರೆ ಕಡೆಗೆ ವರ್ಗಾವಣೆ ದಕ್ಕಿತ್ತು. ಆಮೇಲೆ ನಾನವರನ್ನು ಭೇಟಿಯಾಗಲೇ ಇಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಕುಶಾಲನಗರದಲ್ಲಿ ದೂರದಿಂದ ನೋಡಿದ್ದೆ. 'ಆಗ ಇದ್ದ ಹಾಗೇ ಇದ್ದಾರೆ' ಎಂದುಕೊಂಡೆ.

ಅವರು ಸಿಗಬೇಕಿತ್ತು- 'ನನ್ನ ನೆನಪಿದೆಯಾ ಟೀಚರ್?' ಎಂದು ಒಮ್ಮೆಯಾದರೂ ಕೇಳಬೇಕಿತ್ತು ಎಂದು ಈಗ ಅನಿಸುತ್ತಿದೆ.

ಆಗಿನ ಗುರು-ಶಿಷ್ಯ ಪರಂಪರೆಯೇ ಅಂತಹದ್ದು. ಬುದ್ಧಿ ಮತ್ತು ಭಾವನೆಗಳ ಜೊತೆಗಿನ ಸಂಬಂಧವದು. ಕಲಿಸಿದ ಗುರುವನ್ನು ಕಳೆದುಕೊಳ್ಳುವುದು ಊಹಿಸಿಕೊಳ್ಳಲಾರದಷ್ಟು ದುಃಖವನ್ನು ಕೊಡುತ್ತದೆ.
*
ಕಾಜೂರು ಸತೀಶ್

No comments:

Post a Comment