'ಟಿ.ವಿ. ಇಲ್ಲದೆ ಹೇಗಿರುತ್ತೀಯ?' ಕೇಳುತ್ತಾರೆ ಗೆಳೆಯರು.
ಏಕೆಂದರೆ ಇಲ್ಲಿರುವ 'ಲೊಡಕಾಸಿ' ಬಿ.ಎಸ್.ಎನ್.ಎಲ್. ಟವರ್ ದಿನಕ್ಕೆ ಹನ್ನೆರಡು ಗಂಟೆಗಳ ಕಾಲವಾದರೂ ಎಚ್ಚರದ ಸ್ಥಿತಿಯಲ್ಲಿರುವುದಿಲ್ಲ. ಸ್ವಲ್ಪ ಮೋಡವಾದರೂ ರೇಡಿಯೋ ಸಿಗ್ನಲ್ ಇಲ್ಲದೆ ಗೊರಗೊರ ಕೆಮ್ಮಲು ತೊಡಗುತ್ತದೆ.
'ಇಂತಹ ಕೊರತೆಗಳನ್ನು ತುಂಬುವುದಾದರೂ ಹೇಗೆ?' ಅವರ ಪ್ರಶ್ನೆ.
ಒಂದು ನಿಮಿಷದ ಏಕಾಂತವಾದರೂ ಸಿಗಲಿ ಎಂದು ನಿತ್ಯ ಕಾದು ಕೂರುತ್ತೇನೆ. ನೆರೆಹೊರೆಯವರ 'ಆರ್ಭಟ'ವೇ ನನಗೆ ಸಂಗೀತ. ಅವರ 'ಕೊರೆತ'ವೇ ಉಪನ್ಯಾಸ. ಹುಟ್ಟಿದಾಗಲೇ ಸತ್ತುಹೋದ ನೂರಾರು ಕತೆ-ಕವಿತೆಗಳನ್ನೆಲ್ಲ ಅವರಿಗೇ ಅರ್ಪಿಸಿಬಿಡುತ್ತೇನೆ.
ಇಷ್ಟಾದರೂ ಈ ರೇಡಿಯೋ ಅವರ ಆರ್ಭಟಗಳಿಂದ ನನ್ನನ್ನು ಸ್ವಲ್ಪವಾದರೂ ಪಾರುಮಾಡುತ್ತಿದೆ. ದಿನ ಕಳೆದು ಅಥವಾ ಎಷ್ಟೋ ದಿನಗಳಾದ ಮೇಲೆ ಸಿಗುವ ಅಥವಾ ಪತ್ರಿಕೆಗಳ ಮುಖ ನೋಡಲೂ ಸಾಧ್ಯವಾಗದ ಹೊತ್ತಲ್ಲೆಲ್ಲ ರೇಡಿಯೋ ನನಗೆ ಜಗತ್ತನ್ನು ತೋರಿಸಿ ಹಸಿವನ್ನು ನೀಗಿಸಿದೆ.
ಬಾಲ್ಯದಿಂದಲೂ ಜೊತೆಗಿದ್ದ ಈ ಗೆಳತಿ, ನಾನು ಬದುಕಿರುವವರೆಗೂ ಜೊತೆಗೇ ಇರುತ್ತಾಳೆ!
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, March 22, 2016
ದಿನಚರಿ -16
Subscribe to:
Post Comments (Atom)
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
No comments:
Post a Comment