ಆ ವರ್ಷ ಮರದ ತುಂಬಾ ಬೆಣ್ಣೆಹಣ್ಣಿನ 'ಮಿಡಿ'ಗಳು ತುಂಬಿಹೋಗಿದ್ದವು. ಅದು ಹಣ್ಣಾಗುವ, ಅದನ್ನು ಸಕ್ಕರೆಯೊಂದಿಗೆ ಕಲಸಿ ತಿನ್ನುವ ಕನಸು ಕಾಣಲು ತೊಡಗಿ ವರ್ಷಗಳೇ ಬೇಸತ್ತಿದ್ದವು. ಹುಟ್ಟಿ, ಎಂಟು ವರ್ಷ ಬದುಕಿದ್ದೆ ಅಲ್ಲಿ. ಒಂದಿಡೀ ಆಯುಷ್ಯವನ್ನೇ ಸವೆಸಿದ್ದಷ್ಟು ಅನುಭವಗಳನ್ನು ತುಂಬಿಕೊಟ್ಟಿದ್ದವು ಆ ದಿನಗಳು.
ಮಳೆಗಾಲ. ತುಂಬಾ ಮಳೆಯಾಗುವ ಊರು ಅದು. ಮನೆಯ ಎಲ್ಲ ಸಾಮಾನುಗಳನ್ನೂ ಲಾರಿಗೆ ತುಂಬಿದ್ದೆವು. ಮನೆ ಬಿಡುವ ಕಡೆಯ ಕ್ಷಣದಲ್ಲಿ ಬೆಣ್ಣೆಹಣ್ಣಿನ ಮರವನ್ನೊಮ್ಮೆ ನೋಡಿದೆ- ಬಲಿಯಲು ಇನ್ನೊಂದು ತಿಂಗಳಷ್ಟೇ ಸಾಕಿತ್ತು. ನೆಲ ಕಳೆದುಕೊಂಡ ದುಃಖಕ್ಕಿಂತ ಕನಿಷ್ಟ ಒಂದು ಹಣ್ಣನ್ನಾದರೂ ತಿನ್ನಲಾಗಲಿಲ್ಲವಲ್ಲ ಎಂಬುದೇ ಆಗಿನ ನನ್ನ ಸಂಕಟದ ವಿಷಯವಾಗಿತ್ತು!
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, March 24, 2016
ದಿನಚರಿ -18
Subscribe to:
Post Comments (Atom)
-
✍️ ಡಾ. ಮಹಾಂತೇಶ ಪಾಟೀಲ , ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಕೃಪೆ- Alliance Universit y ' ಕಾಡುಗಳಿದ್ದವು ಕವಿತೆಯಲ್ಲಿ ' ಎನ್ನುವ...
-
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment