ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, January 1, 2016

ನನ್ನ ಪುಸ್ತಕದ ಕುರಿತು ಕೆ.ವಿ. ತಿರುಮಲೇಶ್ ಅವರ ಮಾತು


ಶ್ರೀ ಸತೀಶ್ ಅವರಿಗೆ
ನಮಸ್ಕಾರ! ನೀವು ಕಳಿಸಿದ `ಗಾಯದ ಹೂವುಗಳು’ ಕವನ ಸಂಕಲನ ಸಿಕ್ಕಿದೆ. ಮೇಲಿಂದ ಮೇಲೆ ಓದಿ ನನಗನಿಸಿದ್ದೆಂದರೆ: ಒಬ್ಬ ಮೇಜರ್ ಕವಿಯಾಗುವ ಲಕ್ಷಣಗಳು ನಿಮ್ಮಲ್ಲಿ ಇವೆ. ನಿಮ್ಮ ಆಯ್ಕೆಯ ವಸ್ತುಗಳು—ಇರುವೆ, ಹಾವು, ಕಿಟಿಕಿ, ನದಿ, ಬೋನ್ಸಾಯ್ ಮುಂತಾದವು—ನನಗೆ ತುಂಬಾ ಆಕರ್ಷಣೀಯ. `ಚಪ್ಪಲಿ’ ಕವಿತೆಯೊಂದು ಎಲ್ಲಾ ಕವಿತೆಗಳನ್ನು ಹೇಳುವ ಕವಿತೆಯಂತಿದೆ! ತುಂಬ ಚೆನ್ನಾಗಿದೆ. ಇದಕ್ಕಿಂತ ಹೆಚ್ಚು ಹೇಳುವುದಕ್ಕೇನಿದೆ? ಕವಿತೆ ಬರೆಯುತ್ತಲೇ ಇರಿ.

ನಿಮ್ಮ
ಕೆ.ವಿ.ತಿರುಮಲೇಶ್

1 comment: